ಗದಗ, 13 ಜೂನ್ (ಹಿ.ಸ.):
ಆ್ಯಂಕರ್:-
ಜೂನ್ 15 ರಂದು ಗದಗ ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ 7ನೇ ವರ್ಷದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ,
ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಂಘದ ನಿವೃತ್ತ ನೌಕರ
ಸದಸ್ಯ ದಂಪತಿಗಳ ಸನ್ಮಾನ ಮತ್ತು ಶ್ರೀ ವಿಶ್ವಕರ್ಮ
ಸಮುದಾಯ ಭವನ, ವಿದ್ಯಾರ್ಥಿ ವಸತಿನಿಲಯಗಳ ಕಟ್ಟಡಕ್ಕೆ ದೇಣಿಗೆ ನೀಡಿದ ಮಹಾದಾನಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಸಮಸ್ತ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ. ಕಡ್ಲಿಕೊಪ್ಪ ಹೇಳಿದರು.
ಅವರು ನಗರದ ವಿಶ್ವಕರ್ಮ ಸಮುದಾಯ
ಭವನದಲ್ಲಿ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ
ಹಾಗೂ ಸನ್ಮಾನ ಕಾರ್ಯಕ್ರಮಗಳ ಪೂರ್ವ ಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡಾ ವಿಶ್ವಕರ್ಮ ಸಮಾಜದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಕಲಿಕಾ ಸಾಮಗ್ರಿಗಳ
ವಿತರಣೆ ನಡೆಯಲಿದೆ.
ಸಮಾರಂಭದ ಸಾನಿಧ್ಯವನ್ನು ಇಳಕಲ್-ಕೂಡಲಸಂಗಮ ಶ್ರೀಮತ್
ಆನೇಗುಂದಿ ಪಂಚ ಸಿಂಹಾಸನ ಸರಸ್ವತಿ ಪೀಠ,
ವಿಶ್ವಕರ್ಮ ಬ್ರಹ್ಮಾಂಡಭೇರಿಮಠದ ಶ್ರೀ ವಿಶ್ವನಾಥ
ಮಹಸಾಮೀಜಿ, ಶಿರೋಳ ಶ್ರೀ ಯಚ್ಚರಸ್ವಾಮಿ
ಗವಿಮಠದ ಶ್ರೀ ಅಭಿನವ ಯಚ್ಚರ ಮಹಾಸ್ವಾಮೀ
ಹಾಗೂ ಶಿರಗುಪ್ಪ ಕರಸ್ಥಳ ನಾಗಲಿಂಗಸ್ವಾಮಿ
ಮಠ ಉಪ್ಪಾರಹಳ್ಳಿಯ ಶ್ರೀ ಸುರೇಂದ್ರಸ್ವಾಮೀಜಿ
ವಹಿಸುವರು ಎಂದರು.
ಶಾಸಕರು ಹಾಗೂ ಮಾಜಿ ಸಚಿವರಾದ ಸಿ. ಸಿ. ಪಾಟೀಲ ಸಮಾರಂಭವನ್ನು ಉದ್ಘಾಟಿಸುವರು. ಕಟ್ಟಡದ ಮಹಾದಾನಿಗಳ ಭಾವಚಿತ್ರ ಅನಾವರಣವನ್ನು ವಿಧಾನ ಪರಿಷತ್ ಸದಸ್ಯರಾದ ಎಸ್. ವ್ಹಿ. ಸಂಕನೂರ ನೆರವೇರಿಸುವರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಕರ್ಮ
ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ
ರಾಜಗೋಪಾಲ ಡಿ. ಕಡ್ಲಿಕೊಪ್ಪ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ
ಇಲಾಖೆ ಉಪನಿರ್ದೇಶಕರಾದ ಮಹೇಶ
ಪೋತದಾರ, ಶಿರಹಟ್ಟಿ ತಹಶೀಲ್ದಾರ ಅನೀಲ
ಬಡಿಗೇರ ಹಾಗೂ ಲಕ್ಷ್ಮೇಶ್ವರ ತಹಶೀಲ್ದಾರ
ವಾಸುದೇವ ವಿ. ಸ್ವಾಮಿ ಆಗಮಿಸುವರು. ಶಿರಸಂಗಿ
ವಿಶ್ವಕರ್ಮ ಪ್ರತಿಷ್ಠಾನ ಅಧ್ಯಕ್ಷರಾದ ಮೋಹನ ಎಸ್. ಸುಳ್ಳದ ಹಾಗೂ ಕಲಘಟಗಿ ಉದ್ಯಮಿದಾರರಾದ
ಶ್ರೀಶೈಲ ಶ. ಸುತಾರ ಅವರು ವಿದ್ಯಾರ್ಥಿಗಳಿಗೆ
ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.
ನಿವೃತ್ತರಾದ ಪ್ರಾಚಾರ್ಯ ಶಶಿಧರ ಗ. ಅರ್ಕಸಾಲಿ.
ರಾಜ್ಯ ಉಗ್ರಾಣ ನಿಗಮದ ಬಸಪ್ಪ ಬಿ. ಬಡಿಗೇರ,
ಕೆವಿಜಿ ಬ್ಯಾಂಕ್ ಸಿಬ್ಬಂದಿ ಎಮ್. ವಿ.ಸೂಡಿ
ಹಾಗೂ ಕೆಸಿಸಿ ಬ್ಯಾಂಕ್ ಸಿಬ್ಬಂದಿ ಸುಭಾಷ ವಿ.
ಅಕ್ಕಸಾಲಿಗರ ಅವರಿಗೆ ವಿಶ್ವಕರ್ಮ ನೌಕರಶ್ರೀ
ಪ್ರಶಸ್ತಿ ನೀಡಲಾಗುವುದು.
ಮಾನಪ್ಪ ಮ. ಬಡಿಗೇರ,
ಶ್ರೀಮತಿ ತುಂಗಮ್ಮ ವಿ. ಪತ್ತಾರ, ರಾಘವೇಂದ್ರ ನಿ.ಬಡಿಗೇರ ಹಾಗೂ ಶಂಕ್ರಪ್ಪ ಕಾ. ಬಡಿಗೇರ ಅವರಿಗೆ
ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ನೀಡಲಾಗುವುದು
ಎಂದರು.
ಗಜೇಂಧ್ರಗಡದ ವರುಣಕುಮಾರ ಮ. ಬಡಿಗೇರ,
ಗದಗದ ಆನಂದ ಕಮ್ಮಾರ, ಹೊಂಬಳದ ಕೆ. ಡಿ.
ಬಡಿಗೇರ, ನರೇಗಲ್ಲದ ದೇವೇಂದ್ರಪ್ಪ ನಿ. ಕಮ್ಮಾರ,
ಮಾಗಡಿಯ ಬಸವರಾಜ ಪಿ. ಕಮ್ಮಾರ, ಸೂಡಿಯ
ಈಶ್ವರಪ್ಪ ವೀ. ಅಕ್ಕಸಾಲಿಗರ ಇವರು ನಿವೃತ್ತರಾದ
ನಿಮಿತ್ಯ ದಂಪತಿಗಳ ಸಮೇತ ಸನ್ಮಾನಿಸಲಾಗುವುದು.
ವಿಶ್ವಕರ್ಮ ಭವನ ಹಾಗೂ ವಿದ್ಯಾರ್ಥಿ ವಸತಿ
ನಿಲಯ ಕಟ್ಟಡಗಳ ಸಹಾದಾನಿಗಳಾದ ಶಿವಾನಂದ
ಪಿ ಹೊಂಬಳ, ಡಾ. ಪಿ.ಡಿ. ಪತ್ತಾರ, ನಿರಂಜನ
ನಿ. ಬಡಿಗೇರ, ಡಾ. ಪದ್ಮಾವತಿ ಪತ್ತಾರ, ಆಯ್ದ.
ಈ. ಬಡಿಗೇರ, ಅರುಣ ಚ. ಸುಳ್ಳದ, ಎಸ್. ಈ.
ಅರ್ಕಸಾಲಿ, ರಮೇಶ ಮಾ. ಬಡಿಗೇರ ಇವರನ್ನು
ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಸಿ. ವಿ.
ಬಡಿಗೇರ, ಪದಾಧಿಕಾರಿಗಳಾದ ಕೆ. ಎಸ್. ಬಡಿಗೇರ,
ವಿ. ವಿ. ರಾಜನಾಳ, ಶಂಕರ್ ಕಂಚಗಾರ, ಡಾ.ಗಿರೀಶ
ಬಡಿಗೇರ, ಮಹೇಶ ಕ್ಮಮಾರ ಸೇರಿದಂತೆ ಗಣ್ಯರು
ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Lalita MP