ಕೊಪ್ಪಳ, 13 ಜೂನ್ (ಹಿ.ಸ.)
ಆ್ಯಂಕರ್: ಕೊಪ್ಪಳದಲ್ಲಿ ಪ್ರ ಪ್ರಥಮ ಬಾರಿಗೆ ಕೊಪ್ಪಳ ಕನ್ಸಲಟಿಂಗ್ ಸಿವಿಲ್ ಇಂಜಿನೀಯರ್ಸ್, ಆರ್ಕೀಟೆಕ್ಟ್ ಅಸೋಸಿಯೇಷನ್ ವತಿಯಿಂದ ಶುಕ್ರವಾರದಂದು “ಕೊಪ್ಪಳ ಹೋಮ್ ಎಕ್ಸಪೋ-2025 ಕಾರ್ಯಕ್ರಮ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನಲ್ಲಿ ಉದ್ಘಾಟಿಸಲಾಯಿತು.
ಉದ್ಘಾಟಕರಾಗಿ ಕೊಪ್ಪಳ ನಗರದ ಉದ್ಯಮಿ ಮತ್ತು ಕೆಯುಡಿಎ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಇವರು ಉದ್ಘಾಟನೆ ನೆರವೇರಿಸಿ ಮಾತನಾಡಿ ಎಲ್ಲಾ ಇಂಜೀನಿಯರ್ಸ್ ರವರಿಗೆ ಅಡ್ವಾಬ್ ಟೇಕ್ನಾಲೊಜಿ ಮತ್ತು ಹೊಸ ಟೂಲ್ಸ್ ಗಳು ಲೇಬರ್ಸ್ ಗಳು ಬಳಸಬೇಕು ಮತ್ತು ಹೊಸ ಟೂಲ್ಗೆ ತರಬೇತಿಯನ್ನು ನೀಡಬೇಕು ಹಾಗೂ ಮೇಟ್ರೋ ಸಿಟೀಸ್ ತರಹ ಕೊಪ್ಪಳದಲ್ಲಿ ಜಲತಾಂತ್ರಿಕವನ್ನು ಉಪಯೋಗಿ ಸೊಹ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂದು ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಕಾಂತ್ ಎಸ್ ಚೆನ್ನಾಳ ಬೆಂಗಳೂರು ಮಾತನಾಡಿ ಸ್ಟೀರಿಂಗ್ ಕನ್ಸೋರ್ಟಿಯಮ್, ಇಂಜಿನಿಯರ್ಸ್ ರವರು ತಾಂತ್ರಿವಾಗಿ ಕೆಲಸವನ್ನು ಮಾಡಬೇಕು ಹಳೆ ಟೆಕ್ನಾಲೊಜಿ ಜೋತೆಗೆ ಹೊಸ ಟೆಕ್ನಾಲೊಜಿ ಉಪಯೋಗಿಸಬೇಕು ಅದೇ ರೀತಿಯಾಗಿ 1972ರ ಆರ್ಕಿಟೆಕ್ಟ್ ಕಾಯ್ದೆಯ (AA-1972) ತಾತ್ಕಾಲಿಕ ತಿದ್ದುಪಡಿ ಪ್ರಸ್ತಾವನೆಗಳು ವೃತ್ತಿಪರ ವಲಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿವೆ ಮತ್ತು National Building Code (NBC), ಇದರ ಬಗ್ಗೆ ಎಲ್ಲಾ ಇಂಜಿನಿಯರಗಳು ಕಡ್ಡಾಯವಾಗಿ ಮಾಹಿತಿಯನ್ನು ಪಡೆಯಬೆಕೆಂದು ಎಂದರು.
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಇಂಜಿನೀಯರ್ಸ್ ಅಸೋಸಿಯಷನ್ ಅಧ್ಯಕ್ಷರಾದ ಚನ್ನಕೇಶವ, ಜ್ವಾಯಿಂಟ್ ಸೇಕ್ರೇಟರಿ, ಮಹೇಶ ತಾವರಗೇರೆ ಹಿರಿಯ ಇಂಜಿನೀರಗಳಾದ ಪಂಪಾಪತಿ, ಖಾಲಿದ್ ಸಿದ್ದಖಿ, ಪ್ರಮೋದ್, ಆಕಾಶ ಹುರಕಡ್ಲಿ ಮೀಡಿಯಾ ಕನ್ವೆನರ್ ಕಲೀಮ್ ಖಾನ್ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್