ಗ್ರಾಮೀಣ ಭಾಗದ ಬಸ್ ನಿಲ್ದಾಣಗಳಿಗೆ ಕಾಯಕಲ್ಪ ಕಲ್ಪಿಸಲು ಒತ್ತಾಯ
ಗದಗ, 12 ಮೇ (ಹಿ.ಸ.) ಆ್ಯಂಕರ್:- ಬಿರುಬೇಸಿಗೆಯ ಇಂದಿನ ದಿನಗಳಲ್ಲಿ ಅಲ್ಪ ನೆರಳಿಗೂ ಮರಗಳನ್ನು ಆಶ್ರಯಿಸುವ ಪರಿಸ್ಥಿತಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಪಟ್ಟಣ ಹಾಗೂ ನಗರಗಳಿಗೆ ಪ್ರತಿನಿತ್ಯ ಸಂಚರಿಸುವ ಹಳ್ಳಿ ಜನರು ಬಸ್
ಪೋಟೋ


ಗದಗ, 12 ಮೇ (ಹಿ.ಸ.)

ಆ್ಯಂಕರ್:- ಬಿರುಬೇಸಿಗೆಯ ಇಂದಿನ ದಿನಗಳಲ್ಲಿ ಅಲ್ಪ ನೆರಳಿಗೂ ಮರಗಳನ್ನು ಆಶ್ರಯಿಸುವ ಪರಿಸ್ಥಿತಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಪಟ್ಟಣ ಹಾಗೂ ನಗರಗಳಿಗೆ ಪ್ರತಿನಿತ್ಯ ಸಂಚರಿಸುವ ಹಳ್ಳಿ ಜನರು

ಬಸ್‍ಗಾಗಿ ಕಾಯಲು ಸೂಕ್ತ ಬಸ್ ನಿಲ್ದಾಣ ಇಲ್ಲದೇ ಪರದಾಡುತ್ತಿದ್ದಾರೆ.ಮೈಸೂರು ರಾಜ್ಯದ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರವಾದ ರೋಣದಲ್ಲಿ

ಆಗ ಬಸ್ ನಿಲ್ದಾಣ ನಿರ್ಮಾಣವಾಗಿತ್ತು.

ಮಾತ್ರವಲ್ಲದೆ ಬಸ್ ಘಟಕವನ್ನು ಕೂಡ ಪಡೆದಿತ್ತು. ಆದರೆ ಗ್ರಾಮೀಣ ಪ್ರದೇಶಗಳಿಂದ ಕೂಡಿರುವ ರೋಣ ತಾಲ್ಲೂಕಿನಾದ್ಯಂತ ಇರುವ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಸಮರ್ಪಕವಾದ ಬಸ್ ನಿಲ್ದಾಣಗಳಿಲ್ಲ. ಇದರಿಂದಾಗಿ ಸಾರ್ವಜನಿಕರು ಮಳೆ, ಬಿಸಿಲು, ಚಳಿಗಾಲದಲ್ಲೂ ತೊಂದರೆ

ಅನುಭವಿಸುವಂತಾಗಿದೆ.ತಾಲ್ಲೂಕಿನ ಸವಡಿ, ಚಿಕ್ಕಮಣ್ಣೂರು, ಸಂದಿಗವಾಡ, ಹಿರೇಮಣ್ಣೂರು,

ಸೋಮನಕಟ್ಟಿ, ಹಡಗಲಿ, ಮುದೇನಗುಡಿ, ಬೆನಹಾಳ, ಹುನಗುಂಡಿ, ಕುರಹಟ್ಟಿ, ಮಾಡಲಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳು ಶಿಥಿಲಾವಸ್ಥೆ ತಲುಪಿವೆ.

ಹಲವು ಕಡೆ ಬಸ್ ನಿಲ್ದಾಣದ ತಾರಸಿಗಳು ಬಿದ್ದು ಹೋಗಿದ್ದು, ಮತ್ತೆ ಕೆಲವೆಡೆ ಕುಳಿತುಕೊಳ್ಳುವ ಆಸನಗಳೇ ಕಿತ್ತು ಹೋಗಿವೆ. ಕೆಲವು ಗ್ರಾಮಗಳ

ಬಸ್ ನಿಲ್ದಾಣಗಳು ತಿಪ್ಪೆ ಗುಂಡಿಗಳಿಂದ

ಆವೃತ್ತವಾಗಿದ್ದರೆ; ಮತ್ತೆ ಕೆಲವು ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ. ಆದರೂ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇತ್ತ

ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು

ಆರೋಪ ಮಾಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನದಿಂದ ಪ್ರಯಾಣಿಕರು ಹೈರಾಣಾಗುತ್ತಿದ್ದು, ಪ್ರಯಾಣಿಕರು

ಸಮೀಪದ ಮರಗಳ ನೆರಳು ಅಥವಾ ಅಂಗಡಿಗಳ ನೆರಳಿನಲ್ಲಿ ಬಸ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಅತಿ ದೊಡ್ಡ ಗ್ರಾಮವಾದ ಹೊಳೆಆಲೂರು ಬಸ್ ನಿಲ್ದಾಣದಲ್ಲಿ ಕುಡಿಯಲು ಪ್ರಯಾಣಿಕರಿಗೆ ನೀರಿಲ್ಲ ಮತ್ತು ಶೌಚಾಲಯಗಳು ಕೂಡ ಇಲ್ಲದಿರುವುದು ದುರಂತದ ಸಂಗತಿ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

ತಾಲ್ಲೂಕಿನ ಮತ್ತೊಂದು ದೊಡ್ಡ ಗ್ರಾಮವಾದ ಹಿರೇಹಾಳದಲ್ಲಿ ಕೂಡ ಇದೇ ಸಮಸ್ಯೆ ಮುಂದುವರಿದಿದ್ದು, ಕುಡಿಯುವ ನೀರು ಸೇರಿದಂತೆ ಯಾವುದೇ ಕನಿಷ್ಠ ಮೂಲಸೌಕರ್ಯಗಳನ್ನು ಸಹ ನಿಲ್ದಾಣ ಹೊಂದಿಲ್ಲ. ಸಾರಿಗೆ ಇಲಾಖೆಯವರು ಈ

ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣಿಕರಿಗೆ

ಅನುಕೂಲ ಮಾಡಿಕೊಡಬೇಕು ಎಂದು

ಆಗ್ರಹಿಸಿದ್ದಾರೆ.

ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದೆ. ಬಿಸಿಲು ರಣ ರಣ ಎನ್ನುತ್ತಿದೆ. ಊರಿಂದ ಊರಿಗೆ ಹೋಗಲು ಬಡವರು, ಮಧ್ಯಮ ವರ್ಗದ ಜನರು ಈಗಲೂ ಸರ್ಕಾರಿ ಬಸ್ ಸೇವೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಬಸ್‍ಗಳನ್ನು ಕಾಯಲು ಉರಿ ಬಿಸಿಲಿನಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.

ಇದು ಬೇಸಿಗೆ ಒಂದಕ್ಕೆ ಮಾತ್ರ ಸೀಮಿತವಾದ

ಸಮಸ್ಯೆ ಅಲ್ಲ. ಮಳೆಗಾಲದಲ್ಲಿ ಮಳೆಯಲ್ಲಿ

ನೆನೆಯುವುದು, ಚಳಿಗಾಲದಲ್ಲಿ ನಡುವುದು,

ಬೇಸಿಗೆಯಲ್ಲಿ ಬಿಸಿಲಿನಲ್ಲಿ ಬೇಯುವುದು

ತಪ್ಪದ ಕರ್ಮವಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು

ಗ್ರಾಮೀಣ ಭಾಗದ ಪ್ರಯಾಣಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಎಲ್ಲ ಬಸ್ ನಿಲುಗಡೆ ಕೇಂದ್ರದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande