ಬಳ್ಳಾರಿ, 12 ಮೇ (ಹಿ.ಸ.) :
ಆ್ಯಂಕರ್ : ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯು ಸಂಗನಕಲ್ಲು ಬೆಟ್ಟದಲ್ಲಿರುವ ಭಗವಾನ್ ಗೌತಮ ಬುದ್ಧ ಅವರ ಧ್ಯಾನಾಸಕ್ತ ಪ್ರತಿಮೆಗೆ ಹೂವುಗಳನ್ನು ಸಮರ್ಪಿಸಿ, ಬುದ್ಧ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ಕಮಲ ರತ್ನ ಬಂತೇಜಿ, ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸಿ. ಶಿವಕುಮಾರ್, ಮುಖಂಡರಾದ ಓಂಕಾರಿ ಕಪಗಲ್ಲು, ಮಾನಯ್ಯ .ಬಿ. ಗೋನಾಳ್ ಹಾಗೂ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್