ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಕಾಶ್ಮೀರದ ಪಹಲ್ಲಾಮ್ನಲ್ಲಿ ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ಧ ಭಾರತ ಸರ್ಕಾರ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚಾರಣೆ ನಡೆಸಿ ಪಾಕಿಸ್ತಾನದೊಳಗೇ ನುಗ್ಗಿ ಉಗ್ರರ ತರಬೇತಿ ಕೇಂದ್ರ ಮತ್ತು 100 ಉಗ್ರರ ಸದ್ದಡಗಿಸಿದ ಯೋಧರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಭಾರತೀಯ ಯೋಧರಿಗೆ ಮತ್ತು ಈ ಕಾರ್ಯಾಚಾರಣೆಯಲ್ಲಿ ತನ್ನದೇ ಆದ ಯುದ್ಧ ನೀತಿಯನ್ನು ಅನುಸರಿಸಿ ಮತಾಂಧತೆಯಿಂದ ತುಂಬಿಕೊಂಡಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ದೇಶದ ರಕ್ಷಣಾ ಯೋಧರಿಗೆ ಗದಗ ಜಿಲ್ಲಾ ಯುವ ದೇವಪ್ಪ ಜೆಡಿಎಸ್ ಪಕ್ಷದ ಘಟಕದ ಅಧ್ಯಕ್ಷ ಈ.ಮಲ್ಲಸಮುದ್ರ ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP