ಕೋಲಾರ, ೬ ಏಪ್ರಿಲ್ (ಹಿ.ಸ) :
ಆ್ಯಂಕರ್ : ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸ್ಮರಣೆ, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಯ ಮೂಲಕ ಶ್ರೀರಾಮನವಮಿಯನ್ನು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಕೋಲಾರ ಜಿಲ್ಲೆಗೂ ಶ್ರೀರಾಮ,ಹನುಮನಿಗೂ ವಿಶೇಷ ನಂಟು ಜಿಲ್ಲೆಯಲ್ಲಿ ಹನುಮನ ದೇಗುಲವಿಲ್ಲದ ಊರೇ ಇಲ್ಲ, ಪ್ರತಿ ರಸ್ತೆಯಲ್ಲೂ ಹನುಮನ ದೇಗುಲಗಳು ರಾರಾಜಿಸುವ ಮೂಲಕ ಶ್ರೀರಾಮ,ಹನುಮರ ಪೂಜೆ ನಿರಂತರವಾಗಿ ನಡೆದಿದೆ.
ಶ್ರೀರಾಮನವಮಿ ಅಂಗವಾಗಿ ಎಲ್ಲಾ ದೇವಾಲಯಗಳು, ರಸ್ತೆ ಬದಿಯಲ್ಲಿ ವಿವಿಧ ಸಂಘಟನೆಗಳು, ವ್ಯಾಪಾರಿಗಳು ಬಿಸಿಲ ತಾಪಕ್ಕೆ ದಣಿದು ಸಾಗುವವರಿಗೆ ಪಾನಕ,ಮಜ್ಜಿಗೆ,ಕೋಸಂಬರಿ ವಿತರಿಸುವ ಮೂಲಕ ಶ್ರೀರಾಮನಮಿಯನ್ನು ಹೆಚ್ಚಿನ ಸಡಗರದಿಂದ ಆಚರಿಸಿದರು.
ಎಪಿಎಂಸಿ, ನಗರದ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಬಳಿ, ಕೀಲುಕೋಟೆ, ದೊಡ್ಡಪೇಟೆ, ರಾಮದೇವರಗುಡಿಬೀದಿ, ಕಿಲಾರಿಪೇಟೆ ವೇಣುಗೋಪಾಲಸ್ವಾಮಿ ದೇವಾಲಯ, ನಗರದ ಪಿಸಿ ಬಡಾವಣೆಯ ಶ್ರೀರಾಮ ಕಾಂಡಿಮೆAಟ್ಸ್ನ ಸ್ನೇಹಿತರು, ಪ್ರಭಾತ್ ಚಿತ್ರಮಂದಿರದ ಬಳಿ ಭಾಸ್ಕರ್ ಸ್ನೇಹಿತರು, ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಗಣೇಶ್ ಸ್ನೇಯಿತರು, ಡೂಂಲೈಟ್ ವೃತ್ತ ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.
ಶ್ರೀರಾಮನವಮಿ ಅಂಗವಾಗಿ ನಗರದ ಬಸ್ನಿಲ್ದಾಣದ ಸಮೀಪವಿರುವ ಶ್ರೀರಾಮದೇವರ ಗುಡಿಯಲ್ಲಿ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಇಡೀ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿದ್ದು, ಇಂದು ಬೆಳಗ್ಗೆ ಪಾನಕ,ಮಜ್ಜಿಗೆ, ಕೋಸಂಬರಿ ವಿತರಣೆ ಭರದಿಂದ ನಡೆಯಿತು.
ಕೋಲಾರ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಸಮೀಪ ನಿರ್ಮಾಣಗೊಂಡಿರುವ ಬೃಹತ್ ಶ್ರೀರಾಮ ಚಂದ್ರ ಮೂರ್ತಿಗೆ ಹಾಗೂ ಆಂಜನೇಯಸ್ವಾಮಿಗೆ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಿದ್ದು, ಪಾನಕ,ಹೆಸರುಬೇಳೆ,ಮಜ್ಜಿಗೆ ವಿನಿಯೋಗ ಕಾರ್ಯಕ್ರಮಕ್ಕೆ ನಡೆಯಿತು.
ನಗರದ ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನ, ವೆಂಕಟರಮಣಸ್ವಾಮಿ, ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ, ಕುರುಬರಪೇಟೆಯ ಪಂಚಮುಖಿ ಗಣಪತಿ, ನಗರದೇವತೆ ಕೋಲಾರಮ್ಮ ದೇವಾಲಯ, ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ, ಪಾಲಸಂದ್ರ0 ಎಸ್ಪಿ ನಿವಾಸದ ಮುಂದಿನ ಆಂಜನೇಯಸ್ವಾಮಿ ದೇವಾಲಯ, ಪಿಸಿ ಬಡಾವಣೆಯ ಕೋದಂಡರಾಮಸ್ವಾಮಿ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಭಕ್ತರು ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಮುಂಜಾನೆಯಿAದಲೇ ಸಾಲುಗಟ್ಟಿ ನಿಂತಿದ್ದರು. ಅಭಿಷೇಕ, ಮಹಾಸುದರ್ಶನ ಹೋಮ, ರಾಮತಾರಕ ಹೋಮ, ರಾಮಾಯಣ ಪಾರಾಯಣ, ವೇದ ಪಾರಾಯಣ, ಮಹಾಮಂಗಳಾರತಿ ನೆರವೇರಿದವು. ಹಲವು ಭಕ್ತರು ಉಪವಾಸ ವ್ರತ ಆಚರಿಸಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರು.
ಭಜನಾ ಮಂಡಳಿಗಳು ರಾತ್ರಿ ಶ್ರೀರಾಮ ಭಜನೆ, ಹನುಮಾನ್ ಕೀರ್ತನೆ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.
ಚಿತ್ರ : ಶ್ರೀರಾಮ ನವಮಿ ಪ್ರಯುಕ್ತ ಕೋಲಾರದಲ್ಲಿ ನೀರು ಮಜ್ಜಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್