ದ್ವಿತೀಯ ಪಿಯ ಫಲಿತಾಂಶ ಪ್ರಕಟ ; ಕೋಲಾರ ಜಿಲ್ಲೆಗೆ ೧೬ನೇ ಸ್ಥಾನ
ದ್ವಿತೀಯ ಪಿಯ ಫಲಿತಾಂಶ ಪ್ರಕಟ ; ಕೋಲಾರ ಜಿಲ್ಲೆಗೆ ೧೬ನೇ ಸ್ಥಾನ
ಕೋಲಾರ ಜಿಲ್ಲೆಗೆ ದ್ವಿತೀಯ ಪಿಯುಸಿ ಫಲಿತಂಶದಲ್ಲಿ ೧೬ನೇ ಸ್ಥಾನ ಬಂದಿದ್ದು, ವಾಣಿಜ್ಯದಲ್ಲಿ ಕೋಲಾರ ಮಹಿಳಾ ಸಮಾಜ ಕಾಲೇಜಿನ ಭಾರ್ಗವಿ, ವಿಜ್ಞಾನ ವಿಭಾಗದಲ್ಲಿ ನಗರದ ಎಸ್‌ಡಿಸಿ ಕಾಲೇಜಿನ ಆರ್.ಸಿರಿ, ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.


ಕೋಲಾರ, ೦೮ ಏಪ್ರಿಲ್ (ಹಿ.ಸ) :

ಆ್ಯಂಕರ್ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆ ಬರೆದ ೧೩೨೭೧ ಮಂದಿ ಹೊಸ ಅಭ್ಯರ್ಥಿಗಳಲ್ಲಿ ೯೬೧೫ ಮಂದಿ ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ೭೨.೪೫ ಫಲಿತಾಂಶ ಲಭ್ಯವಾಗಿದೆ. ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸಮಾಜ ಕಾಲೇಜಿನ ಹೆಚ್.ಬಿ.ಭಾರ್ಗವಿ, ವಿಜ್ಞಾನ ವಿಭಾಗದಲ್ಲಿ ಎಸ್‌ಡಿಸಿ ಕಾಲೇಜಿನ ಕಾಲೇಜಿನ ಆರ್.ಸಿರಿ ಹಾಗೂ ಕಲಾ ವಿಭಾಗದಲ್ಲಿ ಕೋಲಾರದ ಬಾಲಕಿಯರ ಪಿಯುಕಾಲೇಜಿನ ಧೈರ್ಯಲಕ್ಷಿö್ಮ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್ ಭಾವಗಿ ತಿಳಿಸಿದ್ದಾರೆ.

ಕೋಲಾರ ಜಿಲ್ಲೆ ಕಳೆದ ಬಾರಿ ಶೇ.೮೬.೧೨ ಫಲಿತಾಂಶದೊ0ದಿಗೆ ೧೨ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಜಿಲ್ಲೆ ೭೨.೪೫ ಫಲಿತಾಂಶದೊ0ದಿಗೆ ೧೬ನೇ ಸ್ಥಾನಕ್ಕೆ ಕುಸಿದಿದೆ ಎಂದು ಮಾಹಿತಿ ನೀಡಿದರು.

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಎಸ್‌ಡಿಸಿ ಕಾಲೇಜಿನ ಆರ್.ಸಿರಿ ೫೯೦ ಅಂಕಗಳೊ0ದಿಗೆ ಜಿಲ್ಲೆಗೆ ಟಾಫರ್ ಆಗಿದ್ದಾರೆ, ವಾಣಿಜ್ಯ ವಿಭಾಗದಲ್ಲಿ ಮಹಿಳಾ ಸಮಾಜ ಕಾಲೇಜಿನ ಹೆಚ್.ಬಿ.ಭಾರ್ಗವಿ ೫೯೭ ಅಂಕಗಳೊ0ದಿಗೆ ರಾಜ್ಯಕ್ಕೆ ೩ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಟಾಫರ್ ಆಗಿದ್ದಾರೆ. ಹಾಗೆಯೇ ಕಲಾ ವಿಭಾಗದಲ್ಲಿ ಈ ಬಾರಿಯೂ ಕೋಲಾರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧೈರ್ಯಲಕ್ಷಿö್ಮ೫೭೫ ಅಂಕಗಳೊ0ದಿಗೆ ಟಾಫರ್ ಆಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಟಾಫರ್ ಆಗಿರುವ ಮಹಿಳಾ ಸಮಾಜ ಕಾಲೇಜಿನ ಹೆಚ್.ಬಿ.ಭಾರ್ಗವಿ ೫೯೭ ಅಂಕಗಳೊ0ದಿಗೆ ರಾಜ್ಯಕ್ಕೆ ೩ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಸ್‌ಡಿಸಿ ಕಾಲೇಜಿನ ಹಾಶೀಕಾ ಲಾನೂರು ೫೯೫ ಅಂಕಗಳೊ0ದಿಗೆ ರಾಜ್ಯಕ್ಕೆ ೭ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಎರಡನೇಯವರಾಗಿ ಹೊರಹೊಮ್ಮಿದ್ದಾರೆ.

ಪುರೋಹಿತ್ಯ ಮಾಡುವ ಶಾಸ್ತಿçಗಳ ಮಗಳು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೆ ಸ್ಥಾನ ಬರುವ ಮೂಲಕ ಚಿನ್ನದ ನಾಡು ಕೋಲಾರ ಜಿಲ್ಲೆಗೆ ಹಿರಿಮೆ ತಂದು ಕೊಟ್ಟಿದ್ದಾರೆ. ಕೋಲಾರ ತಾಲ್ಲೂಕಿನ ಹುದುಕುಳ ಗ್ರಾಮದ ಭಾಸ್ಕರ್ ಶಾಸ್ತç ಹಾಗೂ ಸಂಗೀತ ದಂಪತಿಗಳ ಪುತ್ರಿ ಭಾರ್ಗವಿ ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ತಂದೆ ಭಾಸ್ಕರ್ ಶಾಸ್ತಿç ದೇವಾಲಯದಲ್ಲಿ ಪೂಜೆ ಮಾಡುತ್ತಾ ಬಂದ ಹಣದಲ್ಲಿ ಮೂರು ಜನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಈ ಮಧ್ಯೆ ತನ್ನ ಮಗಳನ್ನ ಸಿಎ ಓದಿಸುವ ನಿಟ್ಟಿನಲ್ಲಿ ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಭಾಸ್ಕರ್ ಶಾಸ್ತಿç ಅವರು ಮಗಳ ಸಾಧನೆ ಕಂಡು ಖುಷಿಯಾಗಿದ್ದಾರೆ.

ಇನ್ನೂ ರ‍್ಯಾಂಕ್ ಬಂದಿರುವುದು ಖುಷಿಯಾಗಿದೆ, ಅಪ್ಪ-ಅಮ್ಮನ ಮಾರ್ಗದರ್ಶನ, ಕಾಲೇಜಿನ ಶ್ರಮ ನಾನು ರ‍್ಯಾಂಕ್ ಬರಲು ಸಾಧ್ಯವಾಯಿತು. ಇನ್ನೂ ಮುಂದೆ ಸಿಎಸ್ ಮಾಡುವ ಉದ್ದೇಶದಿಂದ ನಾನು ವಾಣಿಜ್ಯ ವಿಭಾಗವನ್ನ ಆಯ್ಕೆ ಮಾಡಿಕೊಂಡಿದ್ದೇನೆ ಅನ್ನೋದು ರ‍್ಯಾಂಕ್ ವಿದ್ಯಾರ್ಥಿನಿ ಭಾರ್ಗವಿ ಮಾತು.

ವಿಜ್ಞಾನ ವಿಭಾಗದಲ್ಲಿ ವಿಜ್ಞಾನ ವಿಭಾಗದಲ್ಲಿ ಎಸ್‌ಡಿಸಿ ಕಾಲೇಜಿನ ಕಾಲೇಜಿನ ಆರ್.ಸಿರಿ ೫೯೦ ಅಂಕಗಳೊAದಿಗೆ ರಾಜ್ಯಕ್ಕೆ ೭ನೇ ರ‍್ಯಾಂಕ್ ಹಾಗೂಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿದ್ದಾರೆ. ತಂದೆ ಎಂ.ವಿ.ಎA.ರಾಜು ಸ್ವಂತ ಉದ್ಯೋಗ ಹೊಂದಿದ್ದು, ತಾಯಿ ಕೆ.ಎನ್.ವನಿತಾ ಗೃಹಿಣಿಯಾಗಿದ್ದು, ಈ ವಿದ್ಯಾರ್ಥಿನಿ ವೈದ್ಯಳಾಗುವ ಆಸೆ ಹೊಂದಿದ್ದಾರೆ. ಈ ವಿದ್ಯಾರ್ಥಿನಿಯ ಸಾಧನೆ ಕುರಿತು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಉಷಾ ಗಂಗಾಧರ್, ಪ್ರಾಂಶುಪಾಲ ಡಾ.ಶಿವರಾಂ ಎನ್.ಪಾಟೀಲ್ ಸಂತಸ ಹಂಚಿಕೊAಡರು.

ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ತಂದೆ ಪೊಲೀಸ್ ಪೇದೆ ಆನಂದಮೂರ್ತಿ ಮತ್ತು ಭಾರತಿ ರವರ ಪುತ್ರಿ ಧೈರ್ಯಲಕ್ಷಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ ೬೦೦ ಅಂಕಗಳಿಗೆ ೫೭೫ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಪ್ರಾಂಶುಪಾಲ ಬಾಲಕೃಷ್ಣ ಮತ್ತು ಉಪನ್ಯಾಸಕರು ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿ, ಕಳೆದ ವರ್ಷವೂ ಕಲಾ ವಿಭಾಗದಲ್ಲಿ ಜಿಲ್ಲೆಗೆ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೇ ಟಾಫರ್ ಆಗಿದ್ದರು ಎಂದು ಸ್ಮರಿಸಿದರು.

ಕಲಾ ವಿಭಾಗದಲ್ಲಿ ೧೨೭೯ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೬೮೮ ಮಂದಿ ತೇರ್ಗಡೆಯಾಗಿದ್ದು, ೫೩.೭೯ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ೬೪೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೪೫೯೧ ಮಂದಿ ಉತ್ತೀರ್ಣರಾಗಿ ೭೧.೧೯ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ೫೭೬೭ ಮಂದಿ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೪೩೩೬ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೭೮.೨೨ ಫಲಿತಾಂಶ ಬಂದಿದೆ.

ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದು, ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ ೧೦೩೯೪ ಮಂದಿ ಪೈಕಿ ೭೪೯೬ ಮಂದಿ ಉತ್ತೀರ್ಣರಾಗಿ ಶೇ.೭೨.೧೨ ಫಲಿತಾಂಶ ಬಂದಿದೆ ಆದರೆ ಗ್ರಾಮೀಣ ಭಾಗದಲ್ಲಿ ೨೮೭೭ ಮಂದಿ ಪರೀಕ್ಷೆ ಬರೆದಿದ್ದು, ೨೧೧೯ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೭೩.೬೫ ಫಲಿತಾಂಶ ಲಭ್ಯವಾಗಿದೆ.

ಒಟ್ಟಾರೆ ಫಲಿತಾಂಶದಲ್ಲೂ ಹೊಸ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆ ಬರೆದ ೭೮೫೨ ಬಾಲಕಿಯರಲ್ಲಿ ೫೬೪೧ ಮಂದಿ ತೇರ್ಗಡೆಯಾಗಿ ಶೇ.೭೧.೮೪ ಫಲಿತಾಂಶ ಬಂದಿದೆ. ಇದೇ ರೀತಿ ಬಾಲಕರು ೬೬೩೫ ಮಂದಿ ಪರೀಕ್ಷೆ ಬರೆದಿದ್ದು ೪೧೩೬ ಮಂದಿ ಉತ್ತೀರ್ಣರಾಗಿ ಶೇ.೬೨,೩೪ ಫಲಿತಾಂಶ ಪಡೆಯುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಚಿತ್ರಶೀರ್ಷಿಕೆ : ಕೋಲಾರ ಜಿಲ್ಲೆಗೆ ದ್ವಿತೀಯ ಪಿಯುಸಿ ಫಲಿತಂಶದಲ್ಲಿ ೧೬ನೇ ಸ್ಥಾನ ಬಂದಿದ್ದು, ವಾಣಿಜ್ಯದಲ್ಲಿ ಕೋಲಾರ ಮಹಿಳಾ ಸಮಾಜ ಕಾಲೇಜಿನ ಭಾರ್ಗವಿ, ವಿಜ್ಞಾನ ವಿಭಾಗದಲ್ಲಿ ನಗರದ ಎಸ್‌ಡಿಸಿ ಕಾಲೇಜಿನ ಆರ್.ಸಿರಿ, ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande