ಹುಬ್ಬಳ್ಳಿ, 30 ಮಾರ್ಚ್ (ಹಿ.ಸ.) :
ಆ್ಯಂಕರ್ : ಯುಗಾದಿ ಹಬ್ಬವು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುವ ಪವಿತ್ರ ದಿನವಾಗಿದೆ. ಈ ಹಬ್ಬದಂದು ಬೇವು-ಬೆಲ್ಲ ಸೇವಿಸುವುದು ಜೀವನದ ಸಂತೋಷ ಮತ್ತು ಸಂಕಟಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿದೆ.
ಯುಗಾದಿ ಹಬ್ಬದ ವಿಶೇಷ ಭೋಜನಗಳಲ್ಲಿ ಮಾವಿನಕಾಯಿ ಚಿತ್ರಾನ್ನ ಪ್ರಮುಖವಾಗಿದೆ. ಸಾಮಾನ್ಯ ಮಾವಿನಕಾಯಿ ಚಿತ್ರಾನ್ನಕ್ಕಿಂತ ಬೇರೆ, ಮಸಾಲೆ ಮಾವಿನಕಾಯಿ ಚಿತ್ರಾನ್ನ ವಿಶೇಷವಾದ ರುಚಿ ಹೊಂದಿದ್ದು, ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ತಯಾರಿಸಬಹುದಾಗಿದೆ.
ತುರಿದ ತೋತಾಪುರಿ ಮಾವಿನಕಾಯಿ, ಹಸಿ ತೆಂಗಿನಕಾಯಿ, ಕಡ್ಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಕೊತ್ತಂಬರಿ ಸೊಪ್ಪು ಹಾಗೂ ಮೆಣಸಿನಕಾಯಿ ಬಳಸಿ ಈ ಚಿತ್ರಾನ್ನವನ್ನು ತಯಾರಿಸಲಾಗುತ್ತದೆ.
ಈ ಬಗೆಯ ಚಿತ್ರಾನ್ನ ಖಾರ-ಖಟ್ಟಿದ ರುಚಿ ಹೊಂದಿದ್ದು, ಯುಗಾದಿ ಹಬ್ಬದ ಪರಂಪರೆಯನ್ನು ಹೊಸ ರೀತಿಯಲ್ಲಿ ಸಂಭ್ರಮಿಸಲು ಸುಲಭ ಮತ್ತು ರುಚಿಕರವಾದ ಆಯ್ಕೆಯಾಗಿರುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa