ಹುಬ್ಬಳ್ಳಿ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ೧೩ನೇ ಸಮ್ಮೇಳನ ವಿಜಯಪುರ ಜಿಲ್ಲೆಯ ಬಸವಕಲ್ಯಾಣದ ರಂಭಾಪುರಿ ಶಾಖಾ ಮಠದಲ್ಲಿ ಏಪ್ರಿಲ್ ೧೦ ರಂದು ಜರುಗಲಿದೆ.
ಪಂಚಪೀಠದ ರಂಭಾಪುರಿ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸುವರು.
ವೈಚಾರಿಕ ಚಿಂತನೆಯ ವಿಚಾರ ಗೋಷ್ಟಿ,ಚುಟುಕು ವಾಚನ ಗೋಷ್ಟಿ, ಗಣ್ಯರ ಪುರಸ್ಕಾರಗಳು ಜರುಗಲಿವೆ.
ಬಸವಕಲ್ಯಾಣದ ಘನಲಿಂಗ ರುದ್ರಮುನಿ ಮಹಾಸ್ವಾಮಿಗಳು ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮ ಜರುಗಲಿವೆ ಎಂದು ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa