ನೇಪಾಳದಲ್ಲಿ ‘ಮೊಂಥಾ’ ಚಂಡಮಾರುತದ ತೀವ್ರ ಪ್ರಭಾವ
ಕಠ್ಮಂಡು, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮೊಂಥಾ ಚಂಡಮಾರುತದ ಪರಿಣಾಮವಾಗಿ ಬುಧವಾರ ರಾತ್ರಿ ನೇಪಾಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಕಠ್ಮಂಡು ಸೇರಿದಂತೆ ಹಲವೆಡೆಗಳಲ್ಲಿ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟದತ್ತ ಏರಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾ
Mootha


ಕಠ್ಮಂಡು, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮೊಂಥಾ ಚಂಡಮಾರುತದ ಪರಿಣಾಮವಾಗಿ ಬುಧವಾರ ರಾತ್ರಿ ನೇಪಾಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಕಠ್ಮಂಡು ಸೇರಿದಂತೆ ಹಲವೆಡೆಗಳಲ್ಲಿ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟದತ್ತ ಏರಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಪ್ರಕಾರ, ಕೋಶಿ, ಮಾಧೇಶ್ ಮತ್ತು ಬಾಗ್ಮತಿ ಪ್ರಾಂತ್ಯಗಳ ನದಿಗಳಲ್ಲಿ ಇಂದು ನೀರಿನ ಮಟ್ಟ ಅಪಾಯದ ಹಂತ ಮೀರಬಹುದು. ಚಂಡಮಾರುತದ ಪ್ರಭಾವ ಶನಿವಾರದವರೆಗೆ ಮುಂದುವರಿಯುವ ಸಾಧ್ಯತೆಯಿದ್ದು, ನದಿಗಳ ತೀರ ಪ್ರದೇಶದ ನಿವಾಸಿಗಳು ಅತಿ ಜಾಗರೂಕರಾಗಿರಬೇಕು ಎಂದು ಸರ್ಕಾರ ಸೂಚಿಸಿದೆ.

ತಪ್ಲೆಜಂಗ್, ಸಂಖುವಸಭಾ, ಸೋಲುಖುಂಬು, ತೆಹರತುಂ, ಪಂಚತಾರ್, ಓಖಲ್ದುಂಗ, ಖೋಟಾಂಗ್, ಭೋಜ್‌ಪುರ, ಧಂಕುತ, ಇಲಂ, ಝಾಪಾ, ಮೊರಾಂಗ್, ಸುನ್‌ಸಾರಿ, ಉದಯಪುರ, ಪರ್ಸಾ, ಬಾರಾ, ರೌತಾಹತು, ಸರಲಾಹಿ, ಸಿಂಧೂಲಿ, ರಾಮೆಚಾಪ್, ಕವ್ರೆಪಾಲಂಚೋಕ್, ಲಲಿತ್‌ಪುರ್, ಭಕ್ತಪುರ್, ಮಕ್ವಾನ್‌ಪುರ್, ಚಿತ್ವಾನ್, ನವಲಪರಾಸಿ (ಪೂರ್ವ ಮತ್ತು ಪಶ್ಚಿಮ), ರೂಪಾಂದೇಹಿ ಮತ್ತು ಕಪಿಲವಸ್ತು ಜಿಲ್ಲೆಗಳಲ್ಲಿ ಪ್ರವಾಹದ ಹೆಚ್ಚಿನ ಅಪಾಯವಿದೆ ಎಂದು ಇಲಾಖೆ ಎಚ್ಚರಿಸಿದೆ.

ಹಠಾತ್‌ ಪ್ರವಾಹದ ಭೀತಿ ಇರುವುದರಿಂದ ಪ್ರಯಾಣಿಕರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande