
ಕೋಲಾರ, ೨೫ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೋಲಾರ ಜಿಲ್ಲೆಯ ಅತಿ ದೊಡ್ಡ ಕೆರೆಯಾದ ರಾಮಸಾಗರ ಪಾಲಾರ್ ಕೆರೆ ಅಭಿವೃದ್ಧಿಗಾಗಿ ೧ ಕೋಟಿ ೪೫ ಲಕ್ಷ ರೂಗಳ ಅನುದಾನದಲ್ಲಿ ಕೆರೆ ಮತ್ತು ಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಕೆರೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಎಂ ರೂಪಕಲಾ ಹೇಳಿದರು.
ಕೆಜಿಎಫ್ ತಾಲ್ಲೂಕಿನ ರಾಮಸಾಗರ ಪಾಲಾರ್ ಕೆರೆಗೆ ಬಾಗೀನ ಅರ್ಪಿಸುವ ಮುನ್ನ ಕೆರೆಯ ಮುಂಭಾಗದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ನಂತರ ಸಂಪ್ರದಾಯದಂತೆ ಕೆರೆಯಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು ಕೆಜಿಎಫ್ ತಾಲೂಕಿನ ಬೇತಮಂಗಲ ಹಾಗೂ ರಾಮಸಾಗರ ಪಾಲಾರ್ ಕೆರೆಗಳು ಸತತವಾರದಿಂದ ಕೂಡಿ ಹರಿಯುತ್ತಿದ್ದು ತಾಲೂಕಿನ ಜನತೆಗೆ ಕುಡಿಯುವ ನೀರು ಹಾಗೂ ರೈತರ ಕೊಳವೆಬಾವಿಗಳ ರಿಚಾರ್ಜ್ ಗೆ ಸಹಕಾರಿಯಾಗಿದೆ.
ಕೆರೆಗಳು ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ ಇಂತಹ ಪ್ರಕೃತಿ ವಾತಾವರಣ ವನ್ನು ಆಸ್ವಾದಿಸಲು ರಾಜ್ಯವಲ್ಲದೆ ಹೊರರಾಜ್ಯದ ಆಂಧ್ರ ತಮಿಳ್ ನಾಡುಗಳಿಂದ ಸಹ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ಬೇತಮಂಗಲ ಹಾಗೂ ರಾಮಸಾಗರ ಕೆರೆಗಳ ಅಭಿವೃದ್ಧಿ ಜೊತೆಗೆ ಪ್ರವಾಸಿತಾಣವಾಗಿ ರೂಪಿಸಲು ಬೋಟ್ಗಳನ್ನು ಅಳವಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದೆಯೂ ಅನೇಕ ಶಾಸಕರು ಪ್ರತಿನಿಧಿಸಿದ್ದಾರೆ ನಾನು ಸಹ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾನೆ. ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ , ಕೆಜಿಎಫ್ ನಲ್ಲೇ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಸಲು ಜಮೀನು ಗುರುತಿಸಿ ಕೈಗಾರಿಕೆಗಳನ್ನು ಆರಂಭಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಆದರೆ ಸಹಿಸದ ವಿರೋಧಿಗಳು ಅಭಿವೃದ್ಧಿಯ ನೆಪದಲ್ಲಿ ಕಮಿಷನ್ ವಸುಲಿ ಮಾಡಲಾಗುತ್ತದೆ ಎಂಬ ಆರೋಪಗಳನ್ನು ಮಾಡುತ್ತಿರುವುದು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಆದರೆ ನಾನು ಯಾವುದೇ ಕಮಿಷನ್ ವಸೂಲಿ ಅಲ್ಲಿ ಇಳಿದಿಲ್ಲ ಸಿಕ್ಕ ಅವಕಾಶವನ್ನ ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಂಡು ಜವಾಬ್ದಾರಿಯಿಂದ
ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದೇನೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಬೇತಮಂಗಲ ಕೆರೆಗೆ ನೀರು ಹರಿಯುತ್ತಿರುವುದು ನಿಂತ ನಂತರ ಶುದ್ಧೀಕರಿಸಿ ಕೆಜಿಎಫ್ ಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೇಸಿಗೆ ದಿನಗಳಲ್ಲಿ ಈಗಾಗಲೇ ಅಮೃತ್ ಸಿಟಿ ಯೋಜನೆ ಅಡಿಯಲ್ಲಿ ಪೈಪ್ ಲೈನ್ ಅಳವಡಿಸಿದ್ದು ನುರಿತ ಅಧಿಕಾರಿಗಳಿಂದ ಮತ್ತೊಮ್ಮೆ ಶುದ್ಧೀಕರಣ ಘಟಕ ಪರಿಶೀಲಿಸಿ ನವೀಕರಣಗೊಳಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ ಉಪಾಧ್ಯಕ್ಷ ಶಶಿಕಲಾ ಮಾಜಿ ಅಧ್ಯಕ್ಷ ರಮಾ ಮುರಳಿ, ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ, ಚನ್ನಕೇಶವ ರೆಡ್ಡಿ, ರಾಮಸಾಗರ ಮುರಳಿ, ಕಮಸಂದ್ರ ನಾಗರಾಜ್, ಸರೋಜಮ್ಮ, ವೆಂಗಸಂದ್ರ ಸುನಿತಾ ಚಂದ್ರಶೇಖರ್, ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು ಲಕ್ಷ್ಮೀನಾರಾಯಣ, ವೃತ್ತ ನಿರೀಕ್ಷಕ ರಂಗಶಾಮಯ್ಯ ಆರಕ್ಷಕ ಉಪ ನಿರೀಕ್ಷಕ ಗುರುರಾಜ್,ಮುಖಂಡರಾದ ಕಾರಿ ಪ್ರಸನ್ನ, ಹಂಗಳ ರಮೇಶ್, ರಾಮ್ ಬಾಬು ಗುತ್ತಿಗೆದಾರ ಕೋದಂಡ ರೆಡ್ಡಿ ,ಮುನಿರೆಡ್ಡಿ, ಆಂಜಪ್ಪ, ಚಂದ್ರಕಾಂತ್, ಸೀನಪ್ಪ, ಗೋಪೇನಲ್ಲಿ ಮುರಳಿ, ಪೆಂಡಾಲ್ ನಾರಾಯಣಸ್ವಾಮಿ, ಅನೇಕ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಚಿತ್ರ : ಕೆಜಿಎಫ್ ತಾಲ್ಲೂಕಿನ ರಾಮಸಾಗರ ಕೆರೆಗೆ ಶಾಸಕಿ ಎಂ.ರೂಪಕಲಾ ಬಾಗಿನ ಅರ್ಪಿಸಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್