ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು ಭವಿಷ್ಯ
ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಾಟೇರ’ ಚಲನಚಿತ್ರ ಗೆದ್ದು ಸಾಲು-ಸಾಲು ಚಲನಚಿತ್ರಗಳು ಅವಕಾಶಗಳು ಸಿಗುತ್ತಿರುವ ಹೊತ್ತಿನಲ್ಲಿ ನಟ ದರ್ಶನ್ ತೂಗುದೀಪ ಕಾರಾಗೃಹದ ಪಾಲಾಗಿದ್ದಾರೆ. ನಟ ದರ್ಶನ್ ಕಾರಾಗೃಹ ಸೇರಿದ್ದರಿಂದ ಕೆಲವು ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮ
Darshan is having a bad time


ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಾಟೇರ’ ಚಲನಚಿತ್ರ ಗೆದ್ದು ಸಾಲು-ಸಾಲು ಚಲನಚಿತ್ರಗಳು ಅವಕಾಶಗಳು ಸಿಗುತ್ತಿರುವ ಹೊತ್ತಿನಲ್ಲಿ ನಟ ದರ್ಶನ್ ತೂಗುದೀಪ ಕಾರಾಗೃಹದ ಪಾಲಾಗಿದ್ದಾರೆ. ನಟ ದರ್ಶನ್ ಕಾರಾಗೃಹ ಸೇರಿದ್ದರಿಂದ ಕೆಲವು ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ ಮಂಜು, ನಟ ದರ್ಶನ್ ಗೆ ಸುಮಾರು 8-10 ಜನ ನಿರ್ಮಾಪಕರು ಮುಂಗಡ ಹಣ ಕೊಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ನಟ ದರ್ಶನ್​ಗೆ ಈಗ ಕೆಟ್ಟಕಾಲ, ಗ್ರಹಚಾರ ಸರಿಯಿಲ್ಲ, ಫೆಬ್ರವರಿಗೆ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ. ಮಾತ್ರವಲ್ಲದೆ ದರ್ಶನ್ ಹೊರಬಂದ ಮೇಲೆ ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ನ್ಯಾಯ ಒದಗಿಸಿಕೊಡುತ್ತಾರೆ, ಪರಿಹಾರ ಮಾಡಿಕೊಡುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande