ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿ ದಾರುಣ ಸಾವು
ತುಮಕೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್:ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ದಾರುಣ ಘಟನೆಯೊಂದು
ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿ ದಾರುಣ ಸಾವು


ತುಮಕೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್:ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮತ ಚಲಾಯಿಸಿ ಮನೆಗೆ ಬಂದವನಿಗೆ ಹೃದಯಾಘಾತವಾಗಿದ್ದು ಹಠಾತ್ ಸಾವನ್ನಪ್ಪಿದ್ದಾನೆ.

ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ಈ ದುರಂತ ಸಂಭವಿಸಿದೆ. 54 ವರ್ಷದ ರಮೇಶ್ ಅವರನ್ನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ರಮೇಶ್ ತುಮಕೂರು ನಗರದಲ್ಲಿ ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು.

ರಮೇಶ್ ಅವರು ಇಂದು ಬೆಳಗ್ಗೆ ತುಮಕೂರು ನಗರದ ಎಸ್.ಎಸ್ ಪುರಂನಲ್ಲಿರುವ ಮತಗಟ್ಟೆಗೆ ತೆರಳಿದ್ದರು. ಎಸ್ವಿಕೆ ಸ್ಕೂಲ್ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜೊತೆ ಹೋಗಿದ್ದ ರಮೇಶ್ ಅವರು ಮತ ಚಲಾಯಿಸಿ ಬಂದಿದ್ದರು.

ಬಟ್ಟೆ ವ್ಯಾಪಾರಿ ರಮೇಶ್ ಅವರು ಮತದಾನ ಮುಗಿಸಿ ಮನೆಗೆ ವಾಪಸಾಗುತ್ತಿದ್ದಂತೆ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ರಮೇಶ್ ಅವರು ಬದುಕುಳಿದಿಲ್ಲ.

ಹಿಂದೂಸ್ತಾನ್ ಸಮಾಚಾರ್


 rajesh pande