ಸುರುಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರೋಡ್ ಶೋ
ರಾಯಚೂರು, 26 ಏಪ್ರಿಲ್ (ಹಿ.ಸ): ಆ್ಯಂಕರ್ : ಕೇಂದ್ರದಲ್ಲಿ ನರೇಂದ್ರ ಮೋದಿ ಇರುವವರೆಗೆ ದೇಶ ಸುಭದ್ರವಾಗಿ ಇರಲು ಸಾಧ್ಯ,
ಜೆ.ಪಿ ನಡ್ಡಾ ರೋಡ್ ಶೋ


ರಾಯಚೂರು, 26 ಏಪ್ರಿಲ್ (ಹಿ.ಸ):

ಆ್ಯಂಕರ್ : ಕೇಂದ್ರದಲ್ಲಿ ನರೇಂದ್ರ ಮೋದಿ ಇರುವವರೆಗೆ ದೇಶ ಸುಭದ್ರವಾಗಿ ಇರಲು ಸಾಧ್ಯ, ಹೀಗಾಗಿ ಮತ್ತೊಮ್ಮೆ ರಾಯಚೂರು ಲೋಕಸಭಾ ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕ ಹಾಗೂ ಸುರುಪುರದಿಂದ ವಿಧಾನಸಭೆಗೆ ರಾಜುಗೌಡರನ್ನು ಆಯ್ಕೆ ಮಾಡಿ ಕಳಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾರವರು ಕರೆ ನೀಡಿದರು.

ಅವರಿಂದು ಸುರುಪುರ ನಗರದಲ್ಲಿಂದು ರಾಯಚೂರು ಯಾದಗಿರಿ ಲೋಕಸಭಾ ಅಭ್ಯರ್ಥಿಯಾದ ರಾಜಾ ಅಮರೇಶ್ವರ ನಾಯಕ್ ಹಾಗೂ ಸುರುಪುರ ಉಪಚುನಾವಣೆಯ ಅಭ್ಯರ್ಥಿಯಾದ ರಾಜುಗೌಡರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ರೋಡ್ ಶೋ ನಡೆಸಿ ಮಾತನಾಡಿದವರು ದೇಶದ ಅಭಿವೃದ್ಧಿಗಾಗಿ , ಭದ್ರತೆ , ಸುರಕ್ಷತೆಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದರು.

ಪಟ್ಟಣದ ಪ್ರವಾಸಿ ಮಂದಿರಕ್ಕೆ ಹೆಲಿಕ್ಯಾಪ್ಟರ್ ಮೂಲಕ ನೇರವಾಗಿ ರ್ಯಾಲಿ ಪ್ರಾರಂಭದ ಸ್ಥಳವಾದ ವಾಲ್ಮೀಕಿ ಸರ್ಕಲ್ ಗೆ ಆಗಮಿಸಿದವರು ಅಲ್ಲಿಂದ ತೆರದ ವಾಹನದಲ್ಲಿ ಸಹಸ್ರಾರು ಕಾರ್ಯಕರ್ತರೊಂದಿಗೆ ವೇಣುಗೋಪಾಲಸ್ವಾಮಿ ಮಾರ್ಗವಾಗಿ , ಸರದಾರ ವಲ್ಲಭಾಯಿಪಟೇಲ್ ಮಾರ್ಗ , ಗಾಂಧಿ ವೃತ್ತದವರೆಗೆ ರ್ಯಾಲಿ ಜರುಗಿದ , ರೋಡ್ ಶೋ ಉದ್ದಕ್ಕೂ ಸಹಸ್ರಾರು ಕಾರ್ಯಕರ್ತರು ಬಿಜೆಪಿ ಧ್ವಜ , ಟೋಪಿಗಳನ್ನು ಧರಿಸಿ ದಾರಿಯುದ್ದಕ್ಕೂ ಜಯಘೋಷದಿಂದ ಸಾಗಿದರು. ಗಾಂಧಿವೃತ್ತದಲ್ಲಿ ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜಾ ಅಮರೇಶ್ವರ ನಾಯಕರು ಈ ಚುನಾವಣೆ ದೇಶದ ಚುನಾವಣೆ , ಕಳೆದ ಐದುವರ್ಷದಲ್ಲಿ ರಾಯಚೂರು - ಯಾದಗಿರಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಯಾದಗಿರಿಗೆ ಮೆಡಿಕಲ್ ಕಾಲೇಜು, ಇ.ಎಸ್.ಐ ಆಸ್ಪತ್ರೆ , ಪ್ರಾದೇಶಿಕ ಅಂಚೆ ಕಚೇರಿ ,ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದು , ಅಲ್ಲದೇ ರಾಜುಗೌಡರಿಗೂ ನನಗೂ ಇಬ್ಬರಿಗೂ ಮತ ನೀಡಿ ಆರ್ಶೀವದಿಸುವಂತೆ ಕೋರಿದರು.

ಈ ವೇಳೆ ಸುರುಪುರ ವಿಧಾನಸಭಾ ಅಭ್ಯರ್ಥಿ ರಾಜುಗೌಡ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪಯತ್ನ ಮಾಡಿದ್ದು, ಸದಾ ನಿಮ್ಮ ಜೊತೆಗೆ ಇರುವ ಮೂಲಕ ನಿಮ್ಮ ಮನೆ ಮಗನಾಗಿ ಕೆಲಸ ಮಾಡಲು ಅವಕಾಶ ನೀಡಿ, ಕ್ಷೇತ್ರದಲ್ಲಿ 2 ಬೆಳೆಗೆ ನೀರು ಹರಿಸಲು, ಹಾಗೂ ಸುರಪುರಕ್ಕೆ 24 ತಾಸು ಕುಡಿಯುವ ನೀರು ಒದಗಿಸುವಂತೆ ಕಾರ್ಯ ಮಾಡಿರುವೆ ಹಾಗಾಗಿ ಮತ್ತೊಮ್ಮೆ ಮೋದಿಜಿಯವರ ಆಶಯದಂತೆ 2 ಮತಗಳನ್ನು ಮೇ7 ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಗುರುತಿಗೆ ನೀಡಿ ಆರ್ಶೀವದಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮೀನರೆಡ್ಡಿ ಯಾಳಗಿ ಸೇರಿದಂತೆ ಬಿಜೆಪಿಯ ಮುಖಂಡರುಗಳು ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande