ಬಳ್ಳಾರಿ, 7 ಮೇ (ಹಿ.ಸ):ಆ್ಯಂಕರ್:
ಲೋಕಸಭಾ ಚುನಾವಣೆಯಲ್ಲಿ ಧರ್ಮಕ್ಕೆ ಜಯವಾಗಲಿದ್ದು ಕಾಂಗ್ರೆಸ್ನ ಇ. ತುಕಾರಾಂ ಗೆಲ್ಲಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ತಿಳಿಸಿದ್ದಾರೆ.
ಸಾಮಾನ್ಯರಂತೆ ಸಾಲಿನಲ್ಲಿ ಕುಟುಂಬ ಸಮೇತ ನಿಂತು, ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಸಿಲ ತಾಪವನ್ನೂ ಲೆಕ್ಕಿಸದೆ ಮತದಾರರು ಮತ ಚಲಾಯಿಸುತ್ತಿದ್ದಾರೆ. ಜನರಲ್ಲಿ ಮತದಾನದ ಉತ್ಸಾಹ ಮೂಡಿದೆ. ಕಾಂಗ್ರೆಸ್ನ ಗ್ಯಾರಂಟಿಗಳಿಂದ ಮಹಿಳೆಯರು ಹೆಚ್ಚು ಮತದಾನ ಮಾಡುತ್ತಿದ್ದಾರೆ. ಶೇ. 70 ಕ್ಕಿಂತ ಹೆಚ್ಚು ಮತದಾನವಾಗುವ ವಿಶ್ವಾಸವಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್