ರಾಯಚೂರು, 24 ಏಪ್ರಿಲ್ (ಹಿ.ಸ):
ಆ್ಯಂಕರ್ : ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಡಾ.ರಾಜ್ಕುಮಾರ ಅವರ ಜನ್ಮ ದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಏ.24ರಂದು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಡಾ.ರಾಜ್ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳ ರೀತಿಯಲ್ಲಿ ಡಾ.ರಾಜಕುಮಾರ ಜನ್ಮದಿನವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಲಿಂಗರಾಜ, ಸಾಕ್ಷಾರತಾ ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ, ಸಿಬ್ಬಂದಿಗಳಾದ ಅಬ್ಬಾಸ್ ಖಾನ್, ಅಜರ್ ಉಲ್ ಹಕ್, ಅಪ್ರೆಂಟಿಶಿಪ್ ಅಭ್ಯರ್ಥಿ ಆಂಜನೇಯ್ಯ, ಸಮಘ ಸಂಸ್ಥೆಗಳ ಪದಾಧಿಕಾರಿಗಳಾದ ಜೆ.ಎಲ್ ಗೋಪಿ, ಎನ್.ಎಂ ಮೈತ್ರಿಕರ್, ತಮೇಶ, ಬಸವರಾಜ್, ನಂಜುಂಡಿ, ಪ್ರಸಾದ, ಗುರು ದೇವರಮನಿ, ಬಸೀರ್ ಆಹ್ಮದ್ ಹೊಸಮನಿ, ಉರುಕುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.