ಸಿದ್ದರಾಮಯ್ಯ ಬೆಲೆ ತೆರಬೇಕಾಗುತ್ತದೆ : ಸದಾನಂದಗೌಡ
ಬಳ್ಳಾರಿ, 05 ಮೇ (ಹಿ.ಸ): ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯ ಗುಂಗಿನಲ್ಲಿದ್ದು, ಅವರ
ಸಿದ್ದರಾಮಯ್ಯ ಅವರು ಬೆಲೆ ತೆತ್ತಬೇಕಾಗುತ್ತದೆ : ಮಾಜಿ ಸಿಎಂ ಸದಾನಂದಗೌಡ 


ಸಿದ್ದರಾಮಯ್ಯ ಅವರು ಬೆಲೆ ತೆತ್ತಬೇಕಾಗುತ್ತದೆ : ಮಾಜಿ ಸಿಎಂ ಸದಾನಂದಗೌಡ 


ಸಿದ್ದರಾಮಯ್ಯ ಅವರು ಬೆಲೆ ತೆತ್ತಬೇಕಾಗುತ್ತದೆ : ಮಾಜಿ ಸಿಎಂ ಸದಾನಂದಗೌಡ 


ಸಿದ್ದರಾಮಯ್ಯ ಅವರು ಬೆಲೆ ತೆತ್ತಬೇಕಾಗುತ್ತದೆ : ಮಾಜಿ ಸಿಎಂ ಸದಾನಂದಗೌಡ 


ಸಿದ್ದರಾಮಯ್ಯ ಅವರು ಬೆಲೆ ತೆತ್ತಬೇಕಾಗುತ್ತದೆ : ಮಾಜಿ ಸಿಎಂ ಸದಾನಂದಗೌಡ 


ಬಳ್ಳಾರಿ, 05 ಮೇ (ಹಿ.ಸ):

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯ ಗುಂಗಿನಲ್ಲಿದ್ದು, ಅವರ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ಪಾವತಿಸಬೇಕಾದ ದಿನಗಳು ಹತ್ತಿರ ಇವೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ

ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ - ನೆರವು ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಅವರು ಈ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ನಡೆಸುವುದಾದಲ್ಲಿ ಸತ್ಯಾಸತ್ಯತೆ ಸ್ಪಷ್ಟವಾಗಿ ಜನರಿಗೆ ತಿಳಿಯಲಿದೆ ಎಂದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುವುದನ್ನು ಬಿಟ್ಟು ಬೇರೆ ವಿಷಯವನ್ನೇ ಚುನಾವಣೆಯ ಪ್ರಚಾರದಲ್ಲಿ ಪ್ರಸ್ತಾಪ ಮಾಡುತ್ತಿಲ್ಲ. ರಾಜ್ಯದಲ್ಲಿ ಕುಕ್ಕರ್ನಿಂದ ಹಿಡಿದು ಹೋಟೆಲ್ ಬ್ಲಾಸ್ಟ್ವರೆಗೂ ಏನೆಲ್ಲಾ ನಡೆದಿದೆ ಜನರಿಗೆ ತಿಳಿದಿದೆ ಎಂದರು.

ಹತ್ತು ವರ್ಷಗಳ ಆಡಳಿದಲ್ಲಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ನ ಒಬ್ಬ ಸಚಿವರ ಮೇಲೂ ಕಪ್ಪು ಚುಕ್ಕೆ ಇಲ್ಲ. ಟೆರರಿಸಂ - ನಕ್ಸಲಿಸಂ ಸಂಪೂರ್ಣ ನಿಂತಿದೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಚುನಾವಣೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರುವುದಿಲ್ಲ. ಆ ಕುರಿತು ಹೆಚ್ಚಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ಮುಖಂಡರಾದ ಮುರಹರಗೌಡ, ಗುತ್ತಿಗನೂರು ವಿರೂಪಾಕ್ಷಗೌಡ, ಎಚ್. ಹನುಮಂತಪ್ಪ, ಡಾ. ಬಿ.ಕೆ. ಸುಂದರ್, ಕೆ.ಎಂ. ಮಹೇಶ್ವರಸ್ವಾಮಿ ಇನ್ನಿತರರು ಈ ಸಂದರ್ಭದಲ್ಲಿದ್ದರು.


 rajesh pande