ಮಳೆಗಾಗಿ ಬೆಂಗಳೂರು ನಗರವಾಸಿಗಳಿಂದ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ
ಕಾರವಾರ, 28 ಮಾರ್ಚ್ (ಹಿ.ಸ): ಆ್ಯಂಕರ್: ರಾಜ್ಯದಲ್ಲಿ ಉಂಟಾದ ಜಲಕ್ಷಾಮದಿಂದ ಮುಕ್ತಿ ಸಿಗಲು ಬೆಂಗಳೂರು ನಗರದ ಶಿವಶಂಕರ
 , 28 ಮಾರ್ಚ್ (ಹಿ.ಸ):ಆ್ಯಂಕರ್:


ಕಾರವಾರ, 28 ಮಾರ್ಚ್ (ಹಿ.ಸ):

ಆ್ಯಂಕರ್: ರಾಜ್ಯದಲ್ಲಿ ಉಂಟಾದ ಜಲಕ್ಷಾಮದಿಂದ ಮುಕ್ತಿ ಸಿಗಲು ಬೆಂಗಳೂರು ನಗರದ ಶಿವಶಂಕರ ಗುರುಗಳು ಮತ್ತು ಅವರ ತಂಡದಿಂದ ಕಾಳಿ ನದಿ, ಸಮುದ್ರಕ್ಕೆ ಸಂಗಮ ಆಗುವ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೌದು, ಮೊದಲಿಗೆ ಕಡಲ ತೀರದಲ್ಲಿ ಮರಳಿನಿಂದ ನಿರ್ಮಿಸಲಾದ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಪುರೋಹಿತರ ತಂಡ, ಮಂತ್ರ ಪಠಣ ಮಾಡುವುದರ ಮೂಲಕ ವರುಣ ದೇವನಿಗಾಗಿ ಪ್ರಾರ್ಥನೆ ಮಾಡಿದರು. ಬಳಿಕ ಬೋಟ್ ಮೂಲಕ ಸಮುದ್ರದ ಮಧ್ಯದಲ್ಲಿ ಹೋಗಿ ಮಂತ್ರ ಪಠಣ ಮಾಡುತ್ತ ಹೊಮ್ ಹಾಕಿದರು. ಈ ವೇಳೆ ಹತ್ತಕ್ಕೂ ಹೆಚ್ಚು ಪುರೋಹಿತರು ಶಿವಶಂಕರ ಗುರುಗಳಿಗೆ ಸಾಥ್ ಕೊಟ್ಟು ಆದಷ್ಟು ಬೇಗ ಕೃಪೆ ಮಾಡುವಂತೆ ಮಳೆ ರಾಯನಿಗೆ ಕೈ ಮುಗಿದು ಕೇಳಿಕೊಂಡರು. ಬಳಿಕ ವರಣ ದೇವನ ಮೂರ್ತಿಗೆ ಸಮುದ್ರದ ನೀರಿನಿಂದ ಸ್ನಾನ ಮಾಡಿಸಿದರು.

ವಿಶೇಷ ಪೂಜೆಯಿಂದ ಮುಂದಿನ 48 ದಿನಗಳಲ್ಲಿ ಉತ್ತಮ ಮಳೆ

ಇನ್ನು ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದ ಬರಗಾಲ ಆವರಿಸಿದೆ. ಬೆಸಿಗೆಯ ಆರಂಭದಲ್ಲಿ ಈ ಪರಿಸ್ಥಿತಿ ಉಂಟಾದರೆ ಇನ್ನೂ ಎರಡು ತಿಂಗಳು ಹೇಗೆ ಕಳೆಯುವುದು ಎಂಬ ಆತಂಕದಕಲ್ಲಿ ಕೆಲವರು ಇದ್ದರೆ. ಇನ್ನೂ ಕೆಲವರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಉಂಟಾದ ಜಲಕ್ಷಾಮದಿಂದ ಮುಕ್ತಿ ಸಿಗಬೇಕಾದ್ರೆ ವರುಣ ದೇವನ ಆಗಮನ ಆಗಬೇಕಿದೆ. ಹಾಗಾಗಿ ಬೆಂಗಳೂರು ನಗರದ ಮುನೇಶ್ವರ ಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾದ ಶಿವಶಂಕರ ನೇತೃತ್ವದಲ್ಲಿ ಸಮುದ್ರದ ಮಧ್ಯದಲ್ಲಿ ವಿಶೇಷ ಪೂಜೆಯಿಂದ ಮುಂದಿನ 48 ದಿನಗಳಲ್ಲಿ ಉತ್ತಮ ಮಳೆ ಆಗುತ್ತೆ ಎಂದು ಪುರೋಹಿತರ ತಂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande