ಬೆಂಗಳೂರು, 25 ಮಾರ್ಚ್ (ಹಿ.ಸ):
ಆ್ಯಂಕರ್: ಮನೆಯಲ್ಲಿ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಯನ್ನು ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಸಿಂಗಸಂದ್ರದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಗುಡಿಯಾ ದೇವಿ(42) ಕೊಲೆಯಾಗಿರುವ ಗಾರ್ಮೆಂಟ್ಸ್ ಉದ್ಯೋಗಿ.
ಸಿಂಗಸಂದ್ರದ ವಠಾರವೊಂದರಲ್ಲಿ ಮನೆ ಮಾಡಿಕೊಂಡು ಸಹೋದರಿ ಗೀತಾಕುಮಾರಿ ಹಾಗೂ ಸಂಬಂಧಿ ರಾಜೇಶ್ಕುಮಾರ್ ಜೊತೆ ಗುಡಿಯಾದೇವಿ ವಾಸವಾಗಿದ್ದರು. ರಾಜೇಶ್ಕುಮಾರ್ ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾನೆ. ರಾತ್ರಿ ಯಾವುದೋ ವಿಚಾರಕ್ಕೆ ಈ ಮೂವರ ಮಧ್ಯೆ ಜಗಳವಾಗಿದೆ. ಬೆಳಗಾಗುವಷ್ಟರಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಗುಡಿಯಾದೇವಿ ಮೃತಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್