ಬಳ್ಳಾರಿ : ಅಕ್ರಮ ಹಣ ; ವಾಣಿಜ್ಯ ಇಲಾಖೆ ತನಿಖೆಗೆ ವರ್ಗಾವಣೆ
ಬಳ್ಳಾರಿ, 24 ಏಪ್ರಿಲ್ (ಹಿ.ಸ): ಆ್ಯಂಕರ್ : ಲೋಕಸಭಾ ಚುನಾವಣೆಯಲ್ಲಿ ಹಂಚಿಕೆ ಆಗಲಿದೆ ಎಂದು ಶಂಕೆಯಲ್ಲಿ ಪೊಲೀಸ್, ಎಫ್ಎಸ
ಬಳ್ಳಾರಿ : ಅಕ್ರಮ ಹಣ ; ವಾಣಿಜ್ಯ ಇಲಾಖೆ ತನಿಖೆಗೆ ವರ್ಗಾವಣೆ


ಬಳ್ಳಾರಿ, 24 ಏಪ್ರಿಲ್ (ಹಿ.ಸ):

ಆ್ಯಂಕರ್ : ಲೋಕಸಭಾ ಚುನಾವಣೆಯಲ್ಲಿ ಹಂಚಿಕೆ ಆಗಲಿದೆ ಎಂದು ಶಂಕೆಯಲ್ಲಿ ಪೊಲೀಸ್, ಎಫ್ಎಸ್ಟಿ ಮತ್ತು ವಿವಿಎಸ್ಟಿ ತಂಡವು ಕಂಬಳಿ ಜವಾರ್ ವ್ಯಾಪ್ತಿಯಲ್ಲಿರುವ ಆಭರಣ ವ್ಯಾಪಾರಿಯ ಮನೆಯ ಮೇಲೆ ದಾಳಿ ಹಣ, ಬಂಗಾರ ಮತ್ತು ಬೆಳ್ಳಿಯನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.

ಷಾ ಜ್ಯುವಲರ್ಸ್ ಅಂಗಡಿ ಮಾಲೀಕ ಕಮಲೇಶ್ ಜೈನ್ (45) ಅವರ ಮನೆಯಿಂದ 23 ಲಕ್ಷ ರುಪಾಯಿ ನಗದು, 13 ಕೆಜಿ ಬೆಳ್ಳಿ, 450 ಬಂಗಾರದ ಆಭರಣಗಳು ಮತ್ತು ಇನ್ನಿತರೆಗಳನ್ನು ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನೀಡಿದ್ದಾರೆ ವಾಣಿಜ್ಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.


 rajesh pande