ಚಾರ್ಧಾಮ ಯಾತ್ರೆಗೆ 48 ಲಕ್ಷಕ್ಕೂ ಅಧಿಕ ಭಕ್ತರು: ಯಮುನೋತ್ರಿಯಲ್ಲಿ ಹೊಸ ದಾಖಲೆ
ಡೆಹ್ರಾಡೂನ್, 22 ಆಗಸ್ಟ್ (ಹಿ.ಸ.): ಆ್ಯಂಕರ್: ಉತ್ತರಾಖಂಡದಲ್ಲಿ ಮುಂಗಾರು ಮಳೆಯ ಸವಾಲಿನ ನಡುವೆಯೂ ಚಾರ್‌ಧಾಮ ಯಾತ್ರೆ ಮುಂದುವರಿದಿದ್ದು, ಯಾತ್ರೆಯ 125 ದಿನಗಳಲ್ಲಿ 48 ಲಕ್ಷಕ್ಕೂ ಅಧಿಕ ಭಕ್ತರು ನಾಲ್ಕು ಧಾಮಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ
यमुनोत्री धाम।


ಡೆಹ್ರಾಡೂನ್, 22 ಆಗಸ್ಟ್ (ಹಿ.ಸ.):

ಆ್ಯಂಕರ್: ಉತ್ತರಾಖಂಡದಲ್ಲಿ ಮುಂಗಾರು ಮಳೆಯ ಸವಾಲಿನ ನಡುವೆಯೂ ಚಾರ್‌ಧಾಮ ಯಾತ್ರೆ ಮುಂದುವರಿದಿದ್ದು, ಯಾತ್ರೆಯ 125 ದಿನಗಳಲ್ಲಿ 48 ಲಕ್ಷಕ್ಕೂ ಅಧಿಕ ಭಕ್ತರು ನಾಲ್ಕು ಧಾಮಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 5,22,634 ಭಕ್ತರು ಹೆಚ್ಚಾಗಿ ಆಗಮಿಸಿದ್ದಾರೆ.

ಯಮುನೋತ್ರಿ ಧಾಮದಲ್ಲಿ ಭಕ್ತರ ಸಂಖ್ಯೆ ಹೊಸ ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ 6.68 ಲಕ್ಷಕ್ಕೂ ಅಧಿಕ ಭಕ್ತರು ಯಮುನಾದೇವಿಯ ದರ್ಶನ ಪಡೆದಿದ್ದಾರೆ. ಆ.21ರವರೆಗೆ ಯಮುನೋತ್ರಿಗೆ 6,68,163 ಭಕ್ತರು ಭೇಟಿ ನೀಡಿದ್ದಾರೆ. 2025ರಲ್ಲಿ ಇದೇ ಅವಧಿಯಲ್ಲಿ 6,44,637 ಭಕ್ತರು ಆಗಮಿಸಿದ್ದರು.

ಈ ವರ್ಷದ ಏ.19ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ಬಾಗಿಲು ತೆರೆಯುವುದರೊಂದಿಗೆ ಚಾರ್‌ಧಾಮ ಯಾತ್ರೆ ಆರಂಭಗೊಂಡಿತ್ತು. ಆ.21ರವರೆಗೆ ಬದರಿನಾಥಕ್ಕೆ 16,54,263, ಕೇದಾರನಾಥಕ್ಕೆ 14,65,370, ಗಂಗೋತ್ರಿಗೆ 7,47,671 ಹಾಗೂ ಯಮುನೋತ್ರಿಗೆ 6,68,163 ಭಕ್ತರು ಭೇಟಿ ನೀಡಿದ್ದಾರೆ. ಇದೇ ವೇಳೆ ಹೇಮಕುಂಡ್ ಸಾಹಿಬ್‌ಗೆ 2,69,430 ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬದರಿನಾಥ ಧಾಮದಲ್ಲಿಯೂ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3,62,304 ಭಕ್ತರು ಹೆಚ್ಚಾಗಿ ಆಗಮಿಸಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, ಚಾರ್‌ಧಾಮ ಯಾತ್ರಿಕರ ಸುರಕ್ಷತೆ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. ನಾಲ್ಕೂ ಧಾಮಗಳು ಹಾಗೂ ಯಾತ್ರಾ ಮಾರ್ಗಗಳಲ್ಲಿನ ಪ್ರಮುಖ ತಂಗುದಾಣಗಳಲ್ಲಿ ಭಕ್ತರ ಸುರಕ್ಷತೆ ಮತ್ತು ಸೌಲಭ್ಯಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಯಾತ್ರಾ ವ್ಯವಸ್ಥೆಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಮುಂಗಾರು ಹಿನ್ನೆಲೆಯಲ್ಲಿ ಯಾತ್ರೆಯನ್ನು ವಿಶೇಷ ಮುನ್ನೆಚ್ಚರಿಕೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯೊಂದಿಗೆ ನಡೆಸಲಾಗುತ್ತಿದೆ. ರುದ್ರಪ್ರಯಾಗ, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು 24 ಗಂಟೆಗಳ ಕಾಲ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹವಾಮಾನ ಪ್ರತಿಕೂಲವಾದ ಸಂದರ್ಭದಲ್ಲಿ ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದ್ದು, ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande