ಜೂ. 26ಕ್ಕೆ `ಮುತ್ತು ಬಂದಿದೆ ಕೇರಿಗೆ' ಸಂಗೀತ ನೃತ್ಯ ರೂಪಕ
ಕೊಪ್ಪಳ, 17 ಜೂನ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ವತಿಯಿಂದ ಸಂತಕವಿ ಕನಕದಾಸರ ಜೀವನ ಮತ್ತು ತತ್ವಗಳನ್ನು ಪ್ರತಿಬಿಂಬಿಸುವ “ಮುತ್ತು ಬಂದಿದೆ ಕೇರಿಗೆ” ಎಂಬ ಸಂಗೀತ–ನೃತ್ಯ ರೂಪಕ ಕಾರ್ಯಕ್ರಮವು ಜೂನ್ 26
ಜೂ. 26ಕ್ಕೆ `ಮುತ್ತು ಬಂದಿದೆ ಕೇರಿಗೆ' ಸಂಗೀತ ನೃತ್ಯ ರೂಪಕ


ಕೊಪ್ಪಳ, 17 ಜೂನ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ವತಿಯಿಂದ ಸಂತಕವಿ ಕನಕದಾಸರ ಜೀವನ ಮತ್ತು ತತ್ವಗಳನ್ನು ಪ್ರತಿಬಿಂಬಿಸುವ “ಮುತ್ತು ಬಂದಿದೆ ಕೇರಿಗೆ” ಎಂಬ ಸಂಗೀತ–ನೃತ್ಯ ರೂಪಕ ಕಾರ್ಯಕ್ರಮವು ಜೂನ್ 26 ರಂದು ಸಂಜೆ 6.30ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯಲಿದೆ.

ಹದಿನೈದು–ಹದಿನಾರನೆಯ ಶತಮಾನದಲ್ಲಿ ಬದುಕಿದ ಕನಕದಾಸರು ಸಮಾಜದಲ್ಲಿ ಜಾತಿ, ಕುಲ, ವರ್ಗ ಹಾಗೂ ಮೌಢ್ಯಗಳ ವಿರುದ್ಧ ಹೋರಾಡಿ, ಸಾಮರಸ್ಯ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತಕವಿ. ಭಕ್ತಿ, ಜ್ಞಾನ ಮತ್ತು ಸಮಾಜಸೇವೆಗಳನ್ನು ಸಮನ್ವಯಗೊಳಿಸಿದ ಅವರ ಬಹುಮುಖ ವ್ಯಕ್ತಿತ್ವ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದೆ.

ಈ ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳು ಮತ್ತು ಕಾವ್ಯ ಭಾಗಗಳನ್ನು ಸಂಗೀತ ಮತ್ತು ನೃತ್ಯ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧ್ಯಯನ ಕೇಂದ್ರದ ಆಶಯದಂತೆ, ಈ ನೃತ್ಯ ರೂಪಕದ ಮೂಲಕ ಕನಕದಾಸರ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕಾರ್ಯಕ್ರಮವನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ವತಿಯಿಂದ ಆಯೋಜಿಸಲಾಗಿದೆ. ಪರಿಕಲ್ಪನೆ, ಸಾಹಿತ್ಯ ಮತ್ತು ಸಂಗೀತವನ್ನು ಕಾ.ತ. ಚಿಕ್ಕಣ ಅವರು ರೂಪಿಸಿದ್ದು, ಸಮನ್ವಯ ಮತ್ತು ತಾಂತ್ರಿಕ ನಿರ್ದೇಶನವನ್ನು ಪ್ರವೀಣ್ ಡಿ. ರಾವ್ ಅವರು ವಹಿಸಿದ್ದಾರೆ. ಶ್ರೀನಿವಾಸ್ ಜಿ. ಕಪ್ಪಣ ಅವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ, ಭ್ರಮರಿ ನೃತ್ಯ ಸಂಸ್ಥೆ, ಬೆಂಗಳೂರು ತಂಡದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸ್ನೇಹ ಕಪ್ಪಣ್ಯ ಹಾಗೂ ಎಚ್.ಎಂ. ರೇವಣ್ಣ ಅವರು ಸಹಕಾರ ನೀಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೊಪ್ಪಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ್ ಹಾಗೂ ಜಿಲ್ಲಾ ಸಂಚಾಲಕರಾದ ಯೋಗನರಸಿಂಹ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande