ಗಮನ ಸೆಳೆದ ಈಜು ಸ್ಪರ್ಧೆ
ಅಂತಾರಾಷ್ಟ್ರೀಯ
A swimming competition that attracted attention


A swimming competition that attracted attention


A swimming competition that attracted attention


ಕೊಪ್ಪಳ, 01 ಜೂನ್ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಸ್ವೀಮಿಂಗ್ ಕ್ಲಬ್ ಇವರ ಸಹಯೋಗದೊಂದಿಗೆ ರವಿವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಈಜು ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು.

ಕೊಪ್ಪಳ ಸಿಪಿಐ ಸುರೇಶ ಅವರು ಈಜು ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟು ಈಜು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ದೈಹಿಕವಾಗಿ ಮಾನಸಿಕವಾಗಿ ಸದೃಡವಾಗಲು ಸಾಧ್ಯ. ಹಾಗಾಗಿ ಕ್ರೀಡಾಪಟುಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕ್ರೀಡಾ ಪಟುಗಳಿಗೆ ಉತ್ತಮ ರೀತಿಯಲ್ಲಿ ಕ್ರೀಡಾ ಸೌಲಭ್ಯಗಳು ಸಿಗುತ್ತಿದ್ದು, ಪಾಲಕರು ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠಲ ಜಾಬಗೌಡರ್ ಅವರು ಮಾತನಾಡಿ, ಕ್ರೀಡೆ ಜೀವನದ ಒಂದು ಭಾಗವಾಗಿದೆ. ಪ್ರತಿಯೊಬ್ಬರು ಒಂದೊಂದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಸಾಮಥ್ರ್ಯವನ್ನು ಹೆಚ್ಚಿಸುವದರ ಜೊತೆಗೆ ತಮ್ಮ ಆರೋಗ್ಯವನ್ನು ಸದೃಡವಾಗಿಟ್ಟುಕೊಳ್ಳಬೇಕು.

ಈಜು ಸ್ಪರ್ಧೆ ಬಹಳ ಮುಖ್ಯವಾಗಿದ್ದು, ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳಿಗೆ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈಜು ಸ್ಪರ್ಧೆಯಲ್ಲಿ ಅಂತರ ರಾಷ್ಟ್ರೀಯ ಕ್ರೀಡಾ ಪಟುಗಳಾದ ಅಸ್ಮಿತಾ ಚಂದ್ರು ಹಾಗೂ ವೃತ್ತಿ ಅಗರವಾಲ್ ಅವರು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಅಸ್ಮಿತಾ ಚಂದು ಅವರು ಸಿಂಗಾಪೂರದಲ್ಲಿ ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿರುತ್ತಾರೆ. ಅವರಂತೆ ಎಲ್ಲಾ ಕ್ರೀಡಾಪಟುಗಳು, ಈ ಈಜು ಸ್ಪರ್ಧೆಯಲ್ಲಿ ಆಸಕ್ತಿವಹಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಅಂತರ ರಾಷ್ಟೀಯ ಕ್ರೀಡಾಪಟು ಅಸ್ಮಿತಾಚಂದ್ರು ಅವರು ಮಾತನಾಡಿ, ನಾನು ಹೈದಾರಾಬಾದಿನವಳು ನಾನು ಈಜು ಸ್ಪರ್ಧೆಯಲ್ಲಿ ಹೆಚ್ದಿನ ಆಸ್ತಿಕ ಇದ್ದು, ನನಗೆ ನನ್ನ ತಂದೆ ತಾಯಿಗಳ ಪ್ರೋತ್ಸಾಹ ಹಾಗೂ ನನ್ನ ನೆಚ್ಚಿನ ಗುರುಗಳ ಮಾರ್ಗದರ್ಶನದಿಂದ ಬೆಸಿಗೆ ತರಬೇತಿಯಲ್ಲಿ ಭಾಗಹಿಸುತ್ತಿದ್ದೆ. ದಿನಂಪ್ರತಿ ಬೆಳಿಗ್ಗೆ ಈಜುತ್ತಿದ್ದೆ, ಇದರಿಂದ ನನಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ. ಇದರಂತೆ ತಾವುಗಳು ಹೆಚ್ಚಿನ ರೀತಿಯಲ್ಲಿ ಈಜು ತರಬೇತಿ ಪಡೆದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಿ ಎಂದು ತಿಳಿಸಿದರು.

ಅಂತರ ರಾಷ್ಟೀಯ ಕ್ರೀಡಾಪಟು ವೃತಿ ಅಗರವಾಲ್ ಅವರು ಮಾತನಾಡಿ, ಈಜು ಸ್ಪರ್ಧೆಯಲ್ಲಿ ನಾನು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುತ್ತೇನೆ. ತಾವುಗಳು ಸಹಿತ ಹಿರಿಯರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಹಾರೈಸಿದರು.

50 ಕ್ರೀಡಾಪಟುಗಳು ಭಾಗಿ: ಈಜು ಸ್ಪರ್ಧೆಯಲ್ಲಿ 8 ರಿಂದ 10 ವರ್ಷ ವಯೋಮಿತಿ, 10 ರಿಂದ 12 ವರ್ಷ ವಯೋಮಿತಿ ಹಾಗೂ 12 ರಿಂದ 14 ವರ್ಷ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕೀಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಈಜು ಸ್ಪರ್ಧೆಯಲ್ಲಿ ಒಟ್ಟು 50 ಜನ ಬಾಲಕ ಬಾಲಕೀಯರು ಭಾಗವಹಿಸಿದ್ದರು.

ವಿಜೇತರು : 8 ರಿಂದ 10 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ವಿರಾಟ್ ಪಾಟೀಲ್ ಪ್ರಥಮ ಸ್ಥಾನ, ಆದರ್ಶ ದ್ವಿತೀಯ, ಸುಫಿಯಾನ್ ಪಟೇಲ್ ತೃತೀಯ ಸ್ಥಾನ ಪಡೆದುಕೊಂಡರು. 10 ರಿಂದ 12 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಶೌರ್ಯ ಪಾಟೀಲ್ ಪ್ರಥಮ, ಅನುಷ್ ದ್ವಿತೀಯ, ಶ್ರೀಧರ್ ಭಟ್ ತೃತೀಯ ಸ್ಥಾನ ಪಡೆದುಕೊಂಡರೆ, 12 ರಿಂದ 14 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಗವಿಶ್ ಪ್ರಥಮ, ಶ್ರೇಯಸ್ ದ್ವಿತೀಯ ಮತ್ತು ತನಯ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ತರಬೇತುದಾರರಾದ ಜಾನ್ವಿ ಮತ್ತು ಎ.ಎನ್. ಯತಿರಾಜ್, ಕೊಪ್ಪಳ ತಾಲ್ಲೂಕ ಕ್ರೀಡಾಧಿಕಾರಿಗಳಾದ ಶರಣಬಸವ ಬಂಡಿಹಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಸವಾಜು ಹನಮಸಾಗರ ಅವರು ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande