
ಕೋಲಾರ, ೨೯ ಮಾರ್ಚ್ (ಹಿ.ಸ):
ಆ್ಯಂಕರ್ : ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ೧೧೯ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೋಲಾರ ನಗರದ ಡೂಮ್ ಲೈಟ್ ವೃತ್ತದಿಂದ ಅಕ್ಕಿ, ಬೆಲ್ಲ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಎರಡು ಲಾರಿಗಳಲ್ಲಿ ವಿವಿಧ ದಿನಸಿ ವಸ್ತುಗಳನ್ನು ದೇಣಿಗೆಯಾಗಿ ಕಳುಹಿಸಿಕೊಡಲಾಯಿತು.
ಕಳೆದ ೧೦ ವರ್ಷಗಳಿಂದಲೂ ನಿರಂತರವಾಗಿ ಕೋಲಾರ, ಕಳ್ಳೀಪುರ ಗ್ರಾಮ, ವೇಮಗಲ್, ನರಸಾಪುರ, ರಾಮಸಂದ್ರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗುತ್ತಿದೆ.ಏ.೧ ರಂದು ಶ್ರೀಗಳ ಜನ್ಮದಿನದ ಅಂಗವಾಗಿ ಕೋಲಾರದಿಂದ ತುಮಕೂರಿನ ಮಠಕ್ಕೆ ತೆರಳಲು ವಾಹನ ವ್ಯವಸ್ಥೆಯನ್ನು ಮಾಜಿ ನಗರಸಭೆ ಸದಸ್ಯ ಪ್ರಸಾದ್ ಬಾಬು ಮತ್ತು ಕಳ್ಳೀಪುರ ನಾಗರಾಜ್ ಮಾಡಿದ್ದಾರೆ.
ಈ ವೇಳೆ ಡೂಮ್ ಲೈಟ್ ಸರ್ಕಲ್ ಸಿಆರ್ ಶೇಖರ್ ಮಾತನಾಡಿ, ತುಮಕೂರಿನ ಸಿದ್ದಗಂಗಾ ಮಠವು ಪ್ರಸಿದ್ಧ ತ್ರಿವಿಧ ದಾಸೋಹ ಕೇಂದ್ರವಾಗಿದ್ದು, ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ ಅನ್ನದಾನ ನಡೆಯುತ್ತದೆ. ಹಾಗಾಗಿ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ೧೧೯ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಮಠದ ದಾಸೋಹಕ್ಕೆ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಎರಡು ಲಾರಿಗಳಲ್ಲಿ ವಿವಿಧ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ದೇಣಿಗೆಯಾಗಿ ಕೊಡುತ್ತಿರುವುದಾಗಿ ಹೇಳಿದರು.
ಮುಂದೆಯೂ ಶಿವಕುಮಾರ ಶ್ರೀಗಳ ಜನ್ಮದಿನದ ಪ್ರಯುಕ್ತ ನಿರಂತರವಾಗಿ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್ ಮಾತನಾಡಿ, ಕೋಟ್ಯಾಂತರ ಭಕ್ತಗಣ ಸಲುಹಿದ ಕಾಯಕ ಯೋಗಿ ನಡೆದಾಡುವ ಬಸವ ಸ್ವರೂಪಿ ಪದ್ಮಭೂಷಣ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ಜನ್ಮದಿನವನ್ನು ಜಾತ್ಯಾತೀತ,ಧರ್ಮಾತೀತವಾಗಿ ಎಲ್ಲರೂ ಆಚರಿಸುತ್ತಾರೆ. ಭಾರತದ ಸನಾತನ ಧರ್ಮದ ಇತಿಹಾಸದಲ್ಲಿ ಗುರುಗಳಿಗೆ ವಿಶೇಷವಾದ ಸ್ಥಾನ ಮಾನಗಳಿದೆ. ಪ್ರತಿ ಆದಿ ಹಾಗೂ ಅಂತ್ಯದಲ್ಲಿ ಗುರುವಿನ ಮಹತ್ಮ ದೊಡ್ಡದಿದೆ. ಮನಕುಲವನ್ನು ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಸಮಾಜವನ್ನು ಬೆಳಗಿದಂತ ಮಹಾ ಜ್ಞಾನ ದೀಪವಾಗಿದ್ದಾರೆ .ಅವರು ತೋರಿದ ಮಾರ್ಗದಲ್ಲಿ ಸಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು, ಈ ನಿಟ್ಟಿನಲ್ಲಿ ಕೋಲಾರದ ಭಕ್ತರು ನಿರಂತರವಾಗಿ ದಾಸೋಹಕ್ಕೆ ನೆರವಾಗುತ್ತಿದ್ದಾರೆ ಎಂದರು.
ಕಳೆದ ನಾಲ್ಕು ದಿನಗಳಿಂದ ಭಕ್ತಾದಿಗಳಿಂದ ದವಸ ಸಂಗ್ರಹಿಸಿ ಕಳ್ಳಿಪುರ ಗ್ರಾಮದ ನಾಗರಾಜಪ್ಪ ಮತ್ತು ಮಕ್ಕಳು ಹಾಗೂ ಕೋಲಾರದ ಮಾಜಿ ನಗರಸಭಾ ಸದಸ್ಯರಾದ ಪ್ರಸಾದ್ ಬಾಬು ಮತ್ತು ಸಹೋದರರು ಉಚಿತವಾಗಿ ನೀಡಿದ ಲಾರಿಗಳಲ್ಲಿ ಕೋಲಾರ ಎ.ಪಿ.ಎಂ.ಸಿ .ತರಕಾರಿ ಮಂಡಿಗಳವರಿAದ ಸಂಗ್ರಹಿಸಿದ ಆರುವರೆ ಟನ್ ತರಕಾರಿ, ೨೩೦ ಮೂಟೆ ಬೆಲ್ಲ, ೧೦೫ ಮೂಟೆ ಅಕ್ಕಿ, ಉಪುö್ಪ ೫೧೦ ಕೆಜಿ ಹೆಸರುಬೇಳೆ , ರವೆ, ಬೇಳೆ ಕಾಳುಗಳನ್ನು ಭಕ್ತರಿಂದ ಸಂಗ್ರಹಿಸಿ ಕಳುಹಿಸಿಕೊಡಲಾಯಿತು .
ಕಳ್ಳೀಪುರ ನಟರಾಜ್, ಅಮರನಾಥ್, ಪೊಲೀಸ್ ಬಸವರಾಜ್, ರೇಣುಕಯ್ಯ, ಡೂಮ್ ಲೈಟ್ ಸರ್ಕಲ್ ಸಿಆರ್ ಶೇಖರ್, ಅಣ್ಣಿಹಳ್ಳಿ ನಾಗರಾಜ್, ನಗರಸಭಾ ಸದಸ್ಯ ರಾಕೇಶ್, ವಕ್ಕಲೇರಿ ರಾಜಪ್ಪ, ವೆಂಕಟೇಶ್, ಶ್ರೀನಿವಾಸ್, ಶ್ರೀ ರಾಮ್ ಕಾಫಿ ವರ್ಕ್ಸ್ ಪವನ್, ಅನಿಲ್ ಸೇರಿದಂತೆ ಮಠದ ಎಲ್ಲಾ ಭಕ್ತಾಧಿಗಳು ಮತ್ತು ದಾನಿಗಳು ಮಠಕ್ಕೆ ದಾನ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್