
ನವದೆಹಲಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಾವೀನ್ಯತೆಯ ಸಾಧನೆಗೆ ಕೇವಲ ಪ್ರತಿಭೆ ಮಾತ್ರ ಸಾಲದು ಅದರ ಜೊತೆ ನಿರಂತರ ಪರಿಶ್ರಮವೂ ಅಗತ್ಯವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವಿಚಾರವನ್ನು ಒತ್ತಿಹೇಳುವ ಸಂಸ್ಕೃತ ಗಾದೆಯನ್ನು ಅವರು ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ ನಲ್ಲಿ ಹಂಚಿಕೊಂಡಿದ್ದಾರೆ.
“ಯಥೈಕೇನ್ ನ ಹತೇನ್ ತಾಲಿಕಾ ಸಂಪ್ರಪದ್ಯತೇ। ತೋದ್ಯಂ ಪರಿತ್ಯಕ್ತಂ ನ ಫಲಂ ಕರ್ಮಣಃ ಸ್ಮೃತಂ॥” ಎಂದು ಅವರು ಉಲ್ಲೇಖಿಸಿ, ಅದರ ಅರ್ಥವನ್ನು ವಿವರಿಸಿದ್ದಾರೆ. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲದಂತೆಯೇ, ಯಾವುದೇ ಕಾರ್ಯವೂ ಪ್ರಯತ್ನವಿಲ್ಲದೆ ಫಲ ನೀಡುವುದಿಲ್ಲ. ಕೇವಲ ಸಾಮರ್ಥ್ಯ ಅಥವಾ ಪ್ರತಿಭೆ ಇದ್ದುದರಿಂದ ಮಾತ್ರ ಯಶಸ್ಸು ಸಿಗುವುದಿಲ್ಲ; ನಿರಂತರ ಪರಿಶ್ರಮ ಮತ್ತು ದೃಢ ಸಂಕಲ್ಪವೇ ಸಾಧನೆಯ ಕೀಲಿಕೈ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರ ಹೇಳಿಕೆಯಲ್ಲಿ, ನವೀನ ಆವಿಷ್ಕಾರಗಳ ಕ್ಷೇತ್ರದಲ್ಲಿ ಯುವಜನತೆ ಶ್ರಮ, ಶಿಸ್ತಿನ ಅಭ್ಯಾಸ ಮತ್ತು ಸ್ಥಿರ ಪ್ರಯತ್ನವನ್ನು ಅಳವಡಿಸಿಕೊಳ್ಳಬೇಕು ಎಂಬ ಸಂದೇಶ ಸ್ಪಷ್ಟವಾಗಿ ವ್ಯಕ್ತವಾಗಿದೆ. ಪ್ರತಿಭೆ ಇದ್ದರೂ ಪರಿಶ್ರಮದ ಕೊರತೆಯಿದ್ದರೆ ಫಲ ಸಿಗದು; ಪರಿಶ್ರಮವೇ ಸಾಧನೆಯ ಮೂಲಮಂತ್ರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa