ಶಿಸ್ತು, ಪರಿಶ್ರಮ, ಸಾಮಾಜಿಕ ಕಳಕಳಿ ಅಳವಡಿಸಿಕೊಳ್ಳಬೇಕು : ಜಗದೀಶ ಚಟ್ಟಿ
ಕೊಪ್ಪಳ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕವು ಎನ್‍ಎಸ್‍ಎಸ್ ದಿನಾಚರಣೆಯನ್ನು ಬುಧವಾರ ಆಚರಿಸಿತು. ಪತ್ರಕರ್ತ ಜಗದೀಶಚಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎನ್‍ಎಸ್‍ಎಸ್ ಎಂದರೆ ಶಿಸ್ತು, ತ್ಯಾಗ, ಪರಿಶ್ರಮ,
ಶಿಸ್ತು, ಪರಿಶ್ರಮ, ಸಾಮಾಜಿಕ ಕಳಕಳಿ ಅಳವಡಿಸಿಕೊಳ್ಳಬೇಕು: ಜಗದೀಶಚಟ್ಟಿ


ಶಿಸ್ತು, ಪರಿಶ್ರಮ, ಸಾಮಾಜಿಕ ಕಳಕಳಿ ಅಳವಡಿಸಿಕೊಳ್ಳಬೇಕು: ಜಗದೀಶಚಟ್ಟಿ


ಕೊಪ್ಪಳ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕವು ಎನ್‍ಎಸ್‍ಎಸ್ ದಿನಾಚರಣೆಯನ್ನು ಬುಧವಾರ ಆಚರಿಸಿತು.

ಪತ್ರಕರ್ತ ಜಗದೀಶಚಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎನ್‍ಎಸ್‍ಎಸ್ ಎಂದರೆ ಶಿಸ್ತು, ತ್ಯಾಗ, ಪರಿಶ್ರಮ, ಸ್ವಚ್ಛತೆ, ಸಾಮಾಜಿಕ ಕಳಕಳಿ ಇವುಗಳನ್ನು ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳುವ ವೇದಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎನ್.ಎಸ್.ಎಸ್. ಗೆ ಸೇರಬೇಕು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಚನ್ನಬಸವ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಎನ್‍ಎಸ್‍ಎಸ್ ಅಧಿಕಾರಿ ಶರಣಪ್ಪ ಚೌವ್ಹಾಣ, ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ ಬಿ., ಐಕ್ಯೂಎಸಿ ಸಂಯೋಜಕ ಡಾ. ಅರುಣಕುಮಾರ, ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ, ಡಾ. ಶಶಿಕಾಂತ ಉಮ್ಮಾಪುರೆ, ಡಾ. ಪ್ರಶಾಂತ ಕೊಂಕಲ ಮತ್ತು ಎನ್‍ಎಸ್‍ಎಸ್ ಸ್ವಯಂ ಸೇವಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande