ರಾಯಚೂರು, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಓಂ ಸ್ವಸ್ತಿ ಶ್ರೀ ಶಾಲಿವಾಹನ ಶಕೆ 1947ನೇ ವಿಶ್ವವಸುನಾಮ ಸಂವತ್ಸರ ಶ್ರಾವಣ ಮಾಸ ಶುಕ್ಲ ಪಕ್ಷ ತ್ರಯೋದಶಿ ದಿನಾಂಕ 07-8-2025 ಗುರುವಾರ ರಂದು ಬೆಳಗ್ಗೆ 8-30 ರಿಂದ ಭಗವಾನ ಶ್ರೀ ಜಿಹೇಶ್ವರ ಮೂರ್ತಿಗೆ ರುದ್ರಾಭಿಷೇಕ ಪೂಜೆ, ಅಲಂಕಾರ, ಮಹಾಮಂಗಳಾರತಿ, ಮಹಿಳಾ ಮಂಡಳಿ ವತಿಯಿಂದ ತೊಟ್ಟಿಲೋತ್ಸವ, ಶ್ರೀ ದತ್ತಾತ್ರೇಯ ಮಂದಿರದ ಆವರಣ ತಿಮ್ಮಾಪೂರು ಪೇಟೆ ರಾಯಚೂರಿನಲ್ಲಿ ಆಚರಿಸಲಾಗುವುದು.
ಕಾರಣ ತಾವೆಲ್ಲರೂ ಆಗಮಿಸಿ ಈ ಉತ್ಸವದಲ್ಲಿ ಪಾಲ್ಗೊಂಡು ತನು-ಮನ-ಧನ ದಿಂದ ಸೇವೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಭಗವಾನ ಶ್ರೀ ಜಿಹ್ವೇಶ್ವರ ಕೃಪಾಶೀರ್ವಾದ ಪಡೆದುಕೊಳ್ಳಬೇಕೆಂದು ಸ್ವಕುಳ ಸಾಳಿ ಸಮಾಜ ನೇಕಾರ (ರಿ) ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೋರಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್