ವಿಜಯಪುರ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆ ಮುಷ್ಕರ ಆರಂಭಿಸಿದ್ದು, ಹುನಗುಂದ –ಇಲಕಲ್ಲನಲ್ಲಿ ಸಾರ್ವಜನಿಕರಿಗೆ ಬಸ್ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಲಕಲ್ ಬಸ್ ನಿಲ್ದಾಣ ಪ್ರಯಾಣಿಕರು ಇಲ್ಲದೇ ಬೀಕೋ ಎನ್ನುತ್ತಿತ್ತು. ಕೆಲ ಪ್ರಯಾಣಿಕರು ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾತು. ಇಲಕಲ್ ನ ಡಿಪೋಗಳಲ್ಲಿ ಬಸ್ ಗಳು ನಿಂತಿದ್ದು, ಕೆಲವು ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸದಿರಲು ಕೆಲವೇ ಕೆಲವು ಬಸ್ ಗಳು ಮಾತ್ರ ರಸ್ತೆಗಿಳಿದಿವೆ.
ಹಿಂದೂಸ್ತಾನ್ ಸಮಾಚಾರ್ / jyothi deshpande