ಕೋಲಾರ, ೦೩ ಆಗಸ್ಟ್ (ಹಿ.ಸ) :
ಆ್ಯಂಕರ್ : ವಿಶ್ವ ಯೋಗ ವಿದ್ಯಾ ಟ್ರಸ್ಟ್ ಹಾಗೂ ರಿಷಿ ಸಾಧಕ ಸೇವಾ ಟ್ರಸ್ಟ್ನ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳು ಯೋಗ, ಧ್ಯಾನ ಪ್ರಾಣಾಯಾಮಗಳಂತಹ ಸಾಧನೆಗಳ ಮೂಲಕ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಶಾಸಕ ಸಮೃದ್ದಿ ಮಂಜುನಾಥ್ ಕರೆ ನೀಡಿದರು.
ಜಿಲ್ಲೆಯ ಎಳಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ವಿದ್ಯಾ ಟ್ರಸ್ಟ್ ಹಾಗೂ ರಿಷಿ ಸಾಧಕ ಸೇವಾ ಟ್ರಸ್ಟ್ ಇವರ ವತಿಯಿಂದ ಬೈಸಿಕಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಟ್ರಸ್ಟ್ ನ ಸಾಮಾಜಿಕ ಸೇವೆಯನ್ನು ಆಧ್ಯಾತ್ಮಿಕ ದಾರಿಯನ್ನು ಶ್ಲಾಘಿಸಿ ಅವರು, ವಿದ್ಯಾರ್ಥಿಗಳು ಕಲಿಯುವ ಆಸಕ್ತಿಯ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ವಿದ್ಯೆಗೆ ವಿನಯವೇ ಆಧಾರವಾಗಿದ್ದು, ಸಂಸ್ಕಾರ ಬೆಳೆಸಿಕೊಳ್ಳಿ . ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿವೆ, ಇದರ ಉದ್ದೇಶ ಅನಕ್ಷರತೆ ಇರಬಾರದು ಎಂಬುದಾಗಿದೆ, ಆದರೆ ಇಂದು ಸುಶೀಕ್ಷಿತರೇ ಹೆಚ್ಚು ಅಡ್ಡದಾರಿ ಹಿಡಿಯುತ್ತಿದ್ದು, ಇದು ಸಮಾಜಕ್ಕೆ ಮಾರಕ ಎಂದ ಅವರು, ಶಿಕ್ಷಣದಲ್ಲಿಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ.ವಿದ್ಯೆಗೆ ಬಡತನ ಎಂದಿಗೂ ಅಡ್ಡಿಯಾಗದು, ಕಲಿಯುವ ಇಚ್ಚಾಶಕ್ತಿ, ಛಲ ನಿಮ್ಮಲಿರಬೇಕು ಆಗ ವಿದ್ಯೆ ತಾನಾಗಿಯೇ ನಿಮ್ಮನ್ನು ಆವರಿಸುತ್ತದೆ, ವಿದ್ಯಾರ್ಥಿಗಳು ಸೋಮಾರಿಗಳಾಗಬಾರದು, ವಿದ್ಯೆ ಜತೆಗೆ ಕ್ರೀಡೆಗಳಿಗೂ ಒತ್ತು ನೀಡಿ, ಸಾಧಕರಾಗಿ ಎಂದರು.
ವಿಶ್ವ ಯೋಗ ವಿದ್ಯಾ ಟ್ರಸ್ಟ್ನ ಸ್ಥಾಪಕರಾದ ರಾಜೇಶ್ ಗುರೂಜಿ ಮಾತನಾಡಿ, ಬೈಸಿಕಲ್ ವಿತರಣೆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸಬೇಕು ಹಾಗೂ ಬೈಸಿಕಲ್ ಪಡೆದ ಎಲ್ಲಾ ಮಕ್ಕಳು ಮುಂದಿನ ಜೀವನದಲ್ಲಿ ೧೦ ಮಕ್ಕಳಿಗೆ ಬೈಸಿಕಲ್ ನೀಡುವಂತಹ ಶಕ್ತಿಯನ್ನು ಅಂತಹ ಮಾನಸಿಕ ಸ್ಥೆöÊರ್ಯವನ್ನು ಬೆಳೆಸಿಕೊಳ್ಳಬೇಕು. ಭಾರತದ ಆಧ್ಯಾತ್ಮಿಕತೆಯ ಜ್ಞಾನ ಪ್ರಪಂಚದ ಎಲ್ಲಾ ದೇಶಗಳಲ್ಲೂ ತನ್ನದೇ ಆದ ಪ್ರಭಾವವನ್ನು ಉಂಟು ಮಾಡಿದೆ ಎಂದು ಹೇಳಿ, ನಮ್ಮ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಸಂಸ್ಕಾರ ನೀಡಿದೆ, ಇಂತಹ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಮುಂದಿನ ಪೀಳಿಗೆಯಾದ ನಿಮ್ಮ ಮೇಲಿದೆ. ಇತರೆಲ್ಲಾ ಸಂಸ್ಕೃತಿಗಳ ಆರಂಭದ ಇತಿಹಾಸವಿದೆ, ದಾಖಲೆಗಳಿವೆ ಆದರೆ ನಮ್ಮ ಸಂಸ್ಕೃತಿ ಆರಂಭವೇ ಗೊತ್ತಿಲ್ಲ, ಅತ್ಯಂತ ಪುರಾತನ ಮಾತ್ರವಲ್ಲ, ಶ್ರೀಮಂತ ಸಂಸ್ಕೃತಿ ನಮ್ಮದು, ಅಂಕಿ ಅಂಶಗಳ ಲೆಕ್ಕವೇ ತಿಳಿಯದ ವಿಶ್ವಕ್ಕೆ ಸೊನ್ನೆಯನ್ನು ಕೊಟ್ಟವರು ಭಾರತೀಯರು, ನಮ್ಮ ಸಂಸ್ಕಾರವನ್ನು ಪಾಲಿಸೋಣ, ಸಮಾಜಕ್ಕೆ ಮಾದಿರಯಾಗೋಣ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಧ್ಯಾನ, ಪ್ರಾಣಾಯಾಮ ಹಾಗೂ ಯೋಗಭ್ಯಾಸವನ್ನು ಮಾಡುವುದರಿಂದ ಅವರ ಸ್ಮರಣ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ ಅದರಿಂದ ಉತ್ತಮ ಫಲಿತಾಂಶವನ್ನು ಸಾಧಿಸಬಹುದು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷ ಆಗಿರುವ ಹಿನ್ನಡೆ ಸರಿಪಡಿಸಬೇಕಾಗಿದೆ, ಶೈಕ್ಷಣಿಕ ವರ್ಷಾರಂಭದಿAದಲೇ ಅಗತ್ಯ ಕ್ರಿಯಾಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ, ಶಿಕ್ಷಕರು ಈ ಕುರಿತು ಶ್ರಮಿಸುತ್ತಿದ್ದು, ಪೋಷಕರು ಸಹಾ ಸಹಕಾರ ನೀಡಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೋಹನ್ ಬಾಬು, ಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ರಘುಪತಿ ರೆಡ್ಡಿ ಎಡಹಳ್ಳಿ ಸೋಮಶೇಖರ್,ಬಂಡಹಳ್ಳಿ ಲಕ್ಷಿ÷್ಮÃನಾರಾಯಣ್,ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶಪ್ಪ ಶಂಕರ್ ಕಾಡೇನಹಳ್ಳಿ ಅಶೋಕ್ , ಹರೀಶ್ ಕೀಲು ಹೊಳಲಿ , ಚಂಗಲ ರಾಯಪ್ಪ ದುಬೈನ ಉದ್ಯಮಿಗಳಾದ ಕೈಲಾಸಮುತ್ತ ಎಳಗೊಂಡಹಳ್ಳಿ ಗ್ರಾಮದ ಕೃಷ್ಣಕುಮಾರ್,ಬಾಬು ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಪೋಷಕರು ಗ್ರಾಮಸ್ಥರು ಹಾಜರಿದ್ದರು.
ಚಿತ್ರ ;ಕೋಲಾರ ಜಿಲ್ಲೆಯ ಎಳಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ವಿದ್ಯಾ ಟ್ರಸ್ಟ್ ಹಾಗೂ ರಿಷಿ ಸಾಧಕ ಸೇವಾ ಟ್ರಸ್ಟ್ ಇವರ ವತಿಯಿಂದ ಬೈಸಿಕಲ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಸಮೃದ್ದಿ ಮಂಜುನಾಥ್ ಚಾಲನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್