ರಾಹುಲ್ ಗಾಂಧಿ ಪರ ವಕೀಲರ ಜೀವ ಬೆದರಿಕೆ ಅರ್ಜಿ ವಾಪಸ್
ನವದೆಹಲಿ, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ವೀರ್ ಸಾವರ್ಕರ್ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪುಣೆಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಗೆ ಜೀವ ಬೆದರಿಕೆ ಇದೆ ಎಂಬ ಹೇಳಿಕೆ ಕುರಿತು ಅವರ ವಕೀಲ ಮಿಲಿಂದ್ ಡಿ. ಪವಾರ್ ಸಲ್ಲಿಸಿದ್ದ “ಜ
ರಾಹುಲ್ ಗಾಂಧಿ ಪರ ವಕೀಲರ ಜೀವ ಬೆದರಿಕೆ ಅರ್ಜಿ ವಾಪಸ್


ನವದೆಹಲಿ, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ವೀರ್ ಸಾವರ್ಕರ್ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪುಣೆಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಗೆ ಜೀವ ಬೆದರಿಕೆ ಇದೆ ಎಂಬ ಹೇಳಿಕೆ ಕುರಿತು ಅವರ ವಕೀಲ ಮಿಲಿಂದ್ ಡಿ. ಪವಾರ್ ಸಲ್ಲಿಸಿದ್ದ “ಜೀವಕ್ಕೆ ಬೆದರಿಕೆ” ಅರ್ಜಿಯನ್ನು ಇಂದು ನ್ಯಾಯಾಲಯದಿಂದ ಹಿಂಪಡೆಯಲಿದ್ದಾರೆ.

ಈ ಅರ್ಜಿಯನ್ನು ರಾಹುಲ್ ಗಾಂಧಿ ಅವರ ಯಾವುದೇ ಸೂಚನೆ ಇಲ್ಲದೆ ಸಲ್ಲಿಸಿದ್ದೇನೆ ಎಂದು ಪವಾರ್ ಸ್ಪಷ್ಟಪಡಿಸಿದ್ದು, ರಾಹುಲ್ ಗಾಂಧಿ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಿಲಿಂದ್ ಪವಾರ್ ನಾಳೆ ಔಪಚಾರಿಕವಾಗಿ ಅರ್ಜಿ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande