ಆರೋಗ್ಯ ರಕ್ಷಣೆ ಶ್ರೇಷ್ಠತಾ ಕೇಂದ್ರ ಉದ್ಘಾಟನೆ
ನವದೆಹಲಿ, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ಐಐಟಿ ದೆಹಲಿ ಮತ್ತು ವಾಧ್ವಾನಿ ಫೌಂಡೇಶನ್ ಜಂಟಿಯಾಗಿ ‘ವಾಧ್ವಾನಿ ಇನ್ನೋವೇಶನ್ ನೆಟ್‌ವರ್ಕ್’ ಅಡಿಯಲ್ಲಿ ನಿಖರತೆ ಮತ್ತು ವೈಯಕ್ತಿಕಗೊಳಿಸಿದ ಆರೋಗ್ಯ ರಕ್ಷಣೆ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಎಐ ಆಧಾರಿತ ಆರೋಗ್ಯ ತಂತ್ರಜ್ಞಾನ, ಜೈವಿಕ ತಂತ್ರಜ
Inauguration


ನವದೆಹಲಿ, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ಐಐಟಿ ದೆಹಲಿ ಮತ್ತು ವಾಧ್ವಾನಿ ಫೌಂಡೇಶನ್ ಜಂಟಿಯಾಗಿ ‘ವಾಧ್ವಾನಿ ಇನ್ನೋವೇಶನ್ ನೆಟ್‌ವರ್ಕ್’ ಅಡಿಯಲ್ಲಿ ನಿಖರತೆ ಮತ್ತು ವೈಯಕ್ತಿಕಗೊಳಿಸಿದ ಆರೋಗ್ಯ ರಕ್ಷಣೆ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ಎಐ ಆಧಾರಿತ ಆರೋಗ್ಯ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್‌ ಸಂಶೋಧನೆಯನ್ನು ವಾಣಿಜ್ಯ ಪರಿಹಾರಗಳಾಗಿ ಪರಿವರ್ತಿಸುವುದು ಇದರ ಉದ್ದೇಶ.

ಮೊದಲ ಹಂತದಲ್ಲಿ ವೈಯಕ್ತಿಕಗೊಳಿಸಿದ ಔಷಧ, ಪುನರ್ವಸತಿ, ಬಯೋ-ಇಮೇಜಿಂಗ್, ಎಐ ಆಧಾರಿತ ರೋಗನಿರ್ಣಯ ಸಾಧನಗಳು, ವೃದ್ಧರು ಹಾಗೂ ಅಂಗವಿಕಲರಿಗೆ ಸಹಾಯಕ ತಂತ್ರಜ್ಞಾನ, ಕಡಿಮೆ ಬೆಲೆಯ ಧರಿಸಬಹುದಾದ ಸಾಧನಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ವಾಧ್ವಾನಿ ಫೌಂಡೇಶನ್ ಭಾರತದಲ್ಲಿ ₹1,400 ಕೋಟಿ ಹೂಡಿಕೆ ಮಾಡಲು ಬದ್ಧವಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ವಾಧ್ವಾನಿ ಫೌಂಡೇಶನ್ ಸಿಇಒ ಡಾ. ಅಜಯ್ ಕೇಲಾ ಮತ್ತು ಐಐಟಿ ದೆಹಲಿ ನಿರ್ದೇಶಕ ಪ್ರೊ. ರಂಜನ್ ಬ್ಯಾನರ್ಜಿ ಭಾಗವಹಿಸಿದರು. ಈ ಕೇಂದ್ರವು ಭಾರತೀಯ ಆರೋಗ್ಯ ನಾವೀನ್ಯತೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande