ವಿಜಯಪುರ, 03 ಜುಲೈ (ಹಿ.ಸ.) :
ಆ್ಯಂಕರ್ : ಸಂಸದ ರಮೇಶ ಜಿಗಜಿಣಗಿ ವಿಜಯಪುರ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೆ ನಿಲ್ದಾಣದ ಕಟ್ಟಡ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದರು.
ಈಗಾಗಲೇ ಮೊದಲನೇ ಹಂತದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಆ ಕಟ್ಟಡದಲ್ಲಿ ಒದಗಿಸಲಾದ ಸೌಕರ್ಯಗಳ ಕುರಿತು ಮಾಹಿತಿ ಪಡೆದು ಪ್ರಯಾಣಿಕರಿಗೆ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕೈಗೊಳ್ಳಲು, ನಿರ್ಮಾಣವಾಗಿರುವ ಹೋಟೆಲ್ ಶೀಘ್ರದಲ್ಲೇ ಆರಂಭಿಸಲು ಹಾಗೂ ಜನ ಹೊರಗಡೆಯಿಂದಲೂ ಆ ಸೌಲಭ್ಯ ಬಳಸಿಕೊಳ್ಳುವ ಹಾಗೆ ವ್ಯವಸ್ತೆ ಕಲ್ಪಿಸಲು ಸೂಚಿಸಿದರು.
ಎರಡನೇ ಹಂತದ ನಿಲ್ದಾಣ ಕಾಮಗಾರಿಗೆ ಅನುವು ಮಾಡಿಕೊಡಲು ಹಳೆಯ ರೈಲ್ವೆ ನಿಲ್ದಾಣವನ್ನು ಒಡೆದು ಹಾಕಿ ಹೊಸ ನಿಲ್ದಾಣ ನಿರ್ಮಾಣ ಮಾಡಲು ಅನುವಾಗುವಂತೆ ಕಾರ್ಯತ್ವರಿತಗೊಳಿಸಲು ಸೂಚಿಸಿದರು.
ವಿಜಯಪುರ ನಗರದ ಅಂಡರ್ ಪಾಸ್ ಗಳ ಯೋಜನಾ ವಿವರ ಪಡೆದುಕೊಂಡು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಅನುಮತಿ ದೊರಕಿಸಿಕೊಡಲು ಸೂಚಿಸಿದರು
ರೈಲ್ವೆ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ರೈಲ್ವೆ ನಿಲ್ದಾಣದಲ್ಲಿ ಗೂಡ್ಶೆಡ್ ಇದ್ದ ಭಾಗದಲ್ಲಿ ರೈಲ್ವೆ ಪಿಟ್ ಲೆನ್ ನ್ನು ನಿರ್ಮಾಣ ಕಾಮಗಾರಿ ಕೈಗೊಳ್ಳಲು 50 ಕೋಟಿ ಮೊತ್ತದ ಅನುದಾನ ಮಂಜೂರಾದ ಕುರಿತು ಯಾವ ಹಂತದಲ್ಲಿದೆ , ಮಂಜೂರ ಹಂತದಲ್ಲಿ ಗೊಂದಲ ಪರಿಹಾರಕ್ಕೆ ಅಧಿಕಾರಿಗಳನ್ನು ತೀವ್ರವಾಗಿ ಒತ್ತಾಯಿಪಡಿಸಿದರು.
ಆಲಮಟ್ಟಿ ರೈಲ್ವೆ ನಿಲ್ದಾಣದ ಕಾಮಗಾರಿ ಪ್ರಗತಿಯ ವಿವರ ಪಡೆದುಕೊಂಡರು ಹಾಗೂ ಜನರಿಂದ ಅಹವಾಲು ಆಲಿಸಿದರು. ರೈಲ್ವೆ ನಿಲ್ದಾಣ ಸ್ವಚ್ಛತೆಯ ಕುರಿತು ಮಾರ್ಗದರ್ಶನ ನೀಡಿದರು.
ವಿಜಯಪುರ -ಮಂಗಳೂರ ರೈಲು ನಿರಂತರತೆ ಕುರಿತು ಆದೇಶ ಆದ ಕುರಿತು ಚರ್ಚೆ ನಡೆಸಿದರು.
ಮಾಜಿ ವಿಧಾನ ಪರಿಷತ್ ಶಾಸಕರಾದ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಮಾಧ್ಯಮ ಪ್ರಮುಖ್ ವಿಜಯ ಜೋಷಿ ವಿಜಯಪುರ ರೈಲ್ವೆ ಇಲಾಖೆಯ ವ್ಯವಸ್ಥಾಪಕರಾದ ಎಂ ವೈ ಪಾಟೀಲ್ ಹಾಗೂ ತಾಂತ್ರಿಕ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande