ರಾಯಚೂರು : ಕೆಪಿಎಂಇ ಕಾಯ್ದೆ ಉಲ್ಲಂಘನೆ, ಅನಧಿಕೃತ 19 ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ದಂಡ
ರಾಯಚೂರು, 25 ಜುಲೈ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಿದ್ದು, ನಿಗದಿತ ಅವಧಿಯೊಳಗೆ ದಂಡ ಭರಿಸದೇ ಇದ್ದ ಪಕ್ಷದಲ್ಲಿ ನಿಯಮಾನುಸಾರ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟು
ರಾಯಚೂರು : ಕೆಪಿಎಂಇ ಕಾಯ್ದೆ ಉಲ್ಲಂಘನೆ, ಅನಧಿಕೃತ 19 ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ದಂಡ


ರಾಯಚೂರು, 25 ಜುಲೈ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಿದ್ದು, ನಿಗದಿತ ಅವಧಿಯೊಳಗೆ ದಂಡ ಭರಿಸದೇ ಇದ್ದ ಪಕ್ಷದಲ್ಲಿ ನಿಯಮಾನುಸಾರ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರಬಾಬು ಅವರು ಎಚ್ಚರಿಕೆ ನೀಡಿದ್ದಾರೆ.

ದೇವದುರ್ಗ ತಾಲೂಕಿನ ನಿಷಾ ಕ್ಲಿನಿಕ್ 50 ಸಾವಿರ ರೂ ದಂಡ. ನ್ಯೂ ಇರ್ಫಾನ್ ಕ್ಲಿನಿಕ್‍ಗೆ 25 ಸಾವಿರ ರೂ. ದಂಡ, ಶ್ರೀ ಬಸವಾ ಇಮೇಜಿಂಗ್ ಸೆಂಟರ್‍ಗೆ 25 ಸಾವಿರ ರೂ ದಂಡ, ಶ್ರೀಬಸವ ಲ್ಯಾಬ್ ಎಕ್ಸರೆ & ಇಸಿಜಿ ಸೆಂಟರ್‍ಗೆ 25 ಸಾವಿರ ರೂ. ದಂಡ, ದೇಸಾಯಿ ಕ್ಲಿನಿಕ್‍ಗೆ 15 ಸಾವಿರ ರೂ ದಂಡ, ಶ್ರೀದೇವಿ ಕ್ಲಿನಿಕ್‍ಗೆ 15 ಸಾವಿರ ರೂ. ದಂಡ, ಎಸ್.ಬಿ.ಆಸ್ಪತ್ರೆಗೆ 15 ಸಾವಿರ ರೂ ದಂಡ, ಬಾಬಾ ಡೈಗ್ನೋಷ್ಟಿಕೆ ಸೆಂಟರ್‍ಗೆ 50 ಸಾವಿರ ರೂ ದಂಡ, ಶ್ರೀಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ.

ಅದೇ ರೀತಿ ಸಿರವಾರ ತಾಲೂಕಿನ ಅಮೃತ ಕ್ಲಿನಿಕ್‍ಗೆ 15 ಸಾವಿರ ರೂ ದಂಡ, ವಿಜಯ ಚಂದ್ರಶೇಖರ ಕ್ಲಿನಿಕ್‍ಗೆ 15 ಸಾವಿರ ರೂ ದಂಡ, ಶ್ರೀವೆಂಕಟೇಶ್ವರ ಕ್ಲಿನಿಕ್‍ಗೆ 40 ಸಾವಿರ ರೂ ದಂಡ ವಿದಿಸಲಾಗಿದೆ.

ಲಿಂಗಸುಗೂರು ತಾಲೂಕಿನ ಘನಶ್ರೀ ಲ್ಯಾಬ್‍ಗೆ 50 ಸಾವಿರ ರೂ ದಂಡ, ಅನ್ನಪೂರ್ಣ ಲ್ಯಾಬ್‍ಗೆ 50 ಸಾವಿರ ರೂ ದಂಡ, ಮೆಡಿಕೇರ್ ಲ್ಯಾಬ್‍ಗೆ 15 ಸಾವಿರ ರೂ ದಂಡ, ವಿಜಯ ಕ್ಲಿನಿಕ್‍ಗೆ 15 ಸಾವಿರ ರೂ ದಂಡ ವಿಧಿಸಲಾಗಿದೆ. ಅದೇ ರೀತಿ ರಾಯಚೂರು ತಾಲೂಕಿನ ಪೀಸ್ ಹೆಲ್ತ್ ಕೇರ್‍ಗೆ 25 ಸಾವಿರ ರೂ ದಂಡ, ಶ್ರೀಸೂಗೂರೇಶ್ವರ ಕ್ಲಿನಿಕ್‍ಗೆ 50 ಸಾವಿರ ರೂ ದಂಡ ಹಾಗೂ ಮಾನವಿ ತಾಲೂಕಿನ ಪವನ್ ಕ್ಲಿನಿಕ್‍ಗೆ 15 ಸಾವಿರ ರೂ ದಂಡ ವಿದಿಸಲಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜುಲೈ 10ರಂದು ನಡೆದ ಜಿಲ್ಲಾಮಟ್ಟದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ ರಾಯಚೂರ ಜಿಲ್ಲೆಯಲ್ಲಿನ ಕೆಲವು ಖಾಸಗಿ ಕ್ಲಿನಿಕ್‍ಗಳು ಸಂಸ್ಥೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿದ ಬಗ್ಗೆ ಚರ್ಚೆಯಾಗಿದ್ದು, ಈ ಸಭೆಯಲ್ಲಿ ಈ ಮೇಲಿನಂತೆ ಖಾಸಗಿ ಕ್ಲಿನಿಕ್‍ಗಳಿಗೆ ದಂಡ ವಿಧಿಸಲು ನಿರ್ಣಯಿಸಲಾಗಿದೆ. ಈ ಎಲ್ಲ ಕ್ಲಿನಿಕ್‍ಗಳು ಸಂಸ್ಥೆಗಳು ನಿಗದಿತ ಸಮಯದಲ್ಲಿ ದಂಡವನ್ನು ಪಾವತಿಸಬೇಕು. ವಿಳಂಬವಾದಲ್ಲಿ ಸೂಕ್ತ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande