ವಿಜಯಪುರ, 25 ಜುಲೈ (ಹಿ.ಸ.) :
ಆ್ಯಂಕರ್ : ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ ಬಾಗಲಕೋಟೆಯ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ತರುಣ ಸಂಘದ ಅಡಿಯಲ್ಲಿ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ವಿಜಯ ಮಹಾಂತ ಮಾಲಾಧಾರಗಳಿಗೆ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದಿಗೆಯಲ್ಲಿ ಗುರುಮಹಾಂತಶ್ರೀಗಳು ರುದ್ರಾಕ್ಷಿ ಮಾಲೆ ಹಾಗೂ ವಚನ ಪುಸ್ತಕವನ್ನು ನೀಡಿದರು.
ಈ ಮಾಲಾ ಧಾರಣೆ ಕಾರ್ಯಕ್ರಮ ಒಂದು ತಿಂಗಳವರೆಗೆ ನಿರಂತರ ನಡೆಯುತ್ತದೆ. ಎಲ್ಲಾ ಮಾಲಾ ಧಾರಣೆಯನ್ನು ಒಂದು ವಾರ ಅಥವಾ ೧೫ ದಿವಸ ಒಂದು ತಿಂಗಳವರೆಗೆ ಧಾರಣೆ ಮಾಡಬಹುದು.
ಮಾಲಾ ಧಾರಣೆ ಮಾಡಿಕೊಳ್ಳುವುದಕ್ಕೆ ಯಾವುದೇ ಜಾತಿಯ ನಿಬರ್ಂಧನೆ ಇರುವುದಿಲ್ಲ. ಇದನ್ನು ಎಲ್ಲಾ ಜಾತಿಯವರು ಧರಿಸಿಕೊಳ್ಳಬಹುದು ಎಂದು ವಿಶ್ವನಾಥ ಪಾಟೀಲ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande