ವಿಜಯಪುರ, 24 ಜುಲೈ (ಹಿ.ಸ.) :
ಆ್ಯಂಕರ್ : ನನಗೆ ಏಕವಚನದಲ್ಲಿ ಮಾತನಾಡುತ್ತಾರೆ. ದೀಪ ಆರುವ ಮೊದಲು ಉರಿದು ಆರುತ್ತೆ ಎಂದು ಹೇಳಿದ್ದಾರೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಸಿ.ಸಿ. ಪಾಟಿಲ್ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸ್ವಾಮೀಜಿಗಳು ಒಂದು ಪಕ್ಷದ ಪರ ಇರಬಾರದು. ಮಠದಲ್ಲಿ ಇರಬೇಕು, ಧಾರ್ಮಿಕ ಚಟುವಟಿಕೆ ಏನು ನಡೆಯಬೇಕು ಅದನ್ನು ಮಾಡಬೇಕು ಎಂದರು.
ಹುಬ್ಬಳ್ಳಿ ಬೆಳಗಾವಿ ಮಧ್ಯ ಮಠ ಕಟ್ತಿನಿ ಎಂದು ಯತ್ನಾಳ್ ಮಾತನಾಡುತ್ತಾರೆ. ಇದು ಅವರ ಸಂಸ್ಕೃತಿನೆ. ಬಿಜೆಪಿ ಸಂಸ್ಕೃತಿ, ಅದು ಬಾಯಿಗೆ ಬಂದಂಗೆ ಮಾತಾಡೋದು ಎಂದು ಕಾಶಪ್ಪನವರ ವಾಗ್ದಾಳಿ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande