ಬಳ್ಳಾರಿ, 12 ಜುಲೈ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಟಿ. ಎಂ. ಪ್ರಶಾಂತ ಕುಮಾರ್ ಅವರಿಗೆ ಕೇಂದ್ರ ಸರ್ಕಾರದ `ಉತ್ತಮ ಸಂಶೋಧನೆ’ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸರ್ಕಾರದ ಎಂಎಸ್ಎಂಇ ರಿಸರ್ಚ್ ಸೊಲ್ಯೂಷನ್ ಭುವನೇಶ್ವರದ ಎಂಎಂಐಇಟಿ ಸ್ಕೂಲ್ ನಿರ್ದೇಶಿಸಿದ್ದ `ಶಿಕ್ಷಣ ಕ್ಷೇತ್ರದ ಮನೋವಿಜ್ಞಾನ ಹಾಗೂ ತಂತ್ರಜ್ಞಾನ’ ವಿಷಯದ ಸಂಶೋಧನೆ ಮಾಡಿ, ಸಲ್ಲಿಸಿದ ಪ್ರಬಂಧಕ್ಕೆ ಉತ್ತಮ ಸಂಶೋಧನ `ಶ್ರೇಷ್ಠತೆ – 2025’ ರ (Research Excellence Award in Psychology and Technology ) ಪ್ರಶಸ್ತಿ ಲಭಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್