ರಾಜಕೀಯ ತಿರುವು ಪಡೆದ ಕೋಲ್ಕತ್ತಾ ಕಾನೂನು ಕಾಲೇಜು ಘಟನೆ
ಕೋಲ್ಕತ್ತಾ, 28 ಜೂನ್ (ಹಿ.ಸ.) : ಆ್ಯಂಕರ್ : ಕೋಲ್ಕತ್ತಾದ ಕಸ್ಬಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಘೋರ ಸಾಮೂಹಿಕ ಅತ್ಯಾಚಾರದ ಪ್ರಕರಣ ಇದೀಗ ತೀವ್ರ ರಾಜಕೀಯ ಆಯಾಮವನ್ನು ಪಡೆದಿದೆ. ಘಟನೆಯಲ್ಲಿ ಬಂಧಿತರಾದ ಮೂವರು ಆರೋಪಿಗಳು ತೃಣಮೂಲ ಛಾತ್ರ ಪರಿಷತ್‌ (ಟಿಎಂಸಿಪಿ) ಮತ್ತು ತೃಣಮೂಲ ಕಾಂ
Rape case


ಕೋಲ್ಕತ್ತಾ, 28 ಜೂನ್ (ಹಿ.ಸ.) :

ಆ್ಯಂಕರ್ : ಕೋಲ್ಕತ್ತಾದ ಕಸ್ಬಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಘೋರ ಸಾಮೂಹಿಕ ಅತ್ಯಾಚಾರದ ಪ್ರಕರಣ ಇದೀಗ ತೀವ್ರ ರಾಜಕೀಯ ಆಯಾಮವನ್ನು ಪಡೆದಿದೆ.

ಘಟನೆಯಲ್ಲಿ ಬಂಧಿತರಾದ ಮೂವರು ಆರೋಪಿಗಳು ತೃಣಮೂಲ ಛಾತ್ರ ಪರಿಷತ್‌ (ಟಿಎಂಸಿಪಿ) ಮತ್ತು ತೃಣಮೂಲ ಕಾಂಗ್ರೆಸ್‌ ನಾಯಕರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆಂದು ಬಹಿರಂಗವಾಗಿದೆ.

ಪ್ರಮುಖ ಆರೋಪಿ ಮನೋಜಿತ್ ಮಿಶ್ರಾ (30) ಕಾಲೇಜಿನ ಮಾಜಿ ವಿದ್ಯಾರ್ಥಿ ಮತ್ತು ಇತ್ತೀಚೆಗೆ ತಾತ್ಕಾಲಿಕ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಇತರ ಇಬ್ಬರು, ಪ್ರಮಿತ್ ಮುಖ್ಯೋಪಾಧ್ಯಾಯ (20) ಮತ್ತು ಜೈಬ್ ಅಹ್ಮದ್ (19), ಪ್ರಸ್ತುತ ವಿದ್ಯಾರ್ಥಿಗಳಾಗಿದ್ದು, ಟಿಎಂಸಿಪಿ ಚಟುವಟಿಕೆಗಳಲ್ಲಿ ತೊಡಗಿದ್ದರು.

ಮನೋಜಿತ್ ಮಿಶ್ರಾ ಅವರ ಪ್ರಮುಖ ಟಿಎಂಸಿ ನಾಯಕರೊಂದಿಗೆ – ಮುಖ್ಯಮಂತ್ರಿಗಳ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಹಾಗೂ ಕೌನ್ಸಿಲರ್ ಕಜ್ರಿ ಬ್ಯಾನರ್ಜಿ – ಜೊತೆ ತೆಗೆದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಚಿತ್ರಗಳನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಪ್ರತಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಹಂಚಿಕೊಂಡು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಆರೋಪ – ಟಿಎಂಸಿ 'ಅತ್ಯಾಚಾರಿಗಳ ಪಕ್ಷ'? : ಅಮಿತ್ ಮಾಳವೀಯ, ಈ ಪ್ರಕರಣವು ಕೇವಲ ಅತ್ಯಾಚಾರವಲ್ಲ, ಪಿತೂರಿಯಾಗಿದೆ. ಟಿಎಂಸಿ ಅತ್ಯಾಚಾರಿಗಳನ್ನು ರಕ್ಷಿಸುವ ಪಕ್ಷವಾಗಿದೆ, ಎಂದು ಗಂಭೀರ ಆರೋಪ ಮಾಡಿದ್ದಾರೆ.

ಟಿಎಂಸಿ ಪ್ರತಿಕ್ರಿಯೆ : ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ಛಾಯಾಚಿತ್ರಗಳ ಆಧಾರದಲ್ಲಿ ಸಂಬಂಧ ಸಾಬೀತು ಮಾಡಲಾಗದು, ಎಂದು ಪ್ರತಿಪಾದಿಸಿದ್ದಾರೆ. ಬಹುತೇಕ ಸಾರ್ವಜನಿಕರೊಂದಿಗೆ ಚಿತ್ರ ತೆಗೆದುಕೊಳ್ಳುವುದು ಸಾಮಾನ್ಯವೆಂದು ಅವರು ಪ್ರತಿಪಾದಿಸಿದರು.

ಘಟನೆ ವಿವರ : ಜೂನ್ 25ರಂದು ಸಂಜೆ 7 ಗಂಟೆ ಸುಮಾರಿಗೆ, ವಿದ್ಯಾರ್ಥಿನಿಯನ್ನು 'ಪಕ್ಷದ ನಿಷ್ಠೆ ಪರೀಕ್ಷೆ' ಹೆಸರಿನಲ್ಲಿ ಸಾಮಾನ್ಯ ಕೋಣೆಗೆ ಕರೆಸಲಾಗಿತ್ತು. ನಂತರ ಆಕೆಯನ್ನು ಬಲವಂತವಾಗಿ ಕಾವಲುಗಾರನ ಕೋಣೆಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದರೆಂದು ಆರೋಪ ಇದೆ. ಕಾವಲುಗಾರ ಸಹಿತ ಕೆಲವು ಸಿಬ್ಬಂದಿ ಸಹ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸ್ ತನಿಖೆ ಮುಂದುವರಿದಿದೆ :

ಮೂವರು ಆರೋಪಿಗಳನ್ನು ಜುಲೈ 1 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಡಿಜಿಟಲ್ ಪುರಾವೆಗಳ ಪರಿಶೀಲನೆ ನಡೆಯುತ್ತಿದೆ.

ಟಿಎಂಸಿಪಿ ಪ್ರತಿಕ್ರಿಯೆ : ಟಿಎಂಸಿಪಿ ರಾಜ್ಯಾಧ್ಯಕ್ಷ ತ್ರಿಣಕೂರ್ ಭಟ್ಟಾಚಾರ್ಯ, ಆರೋಪ ಸಾಬೀತಾದರೆ, ಅಪರಾಧಿಗಳಿಗೆ ಪಕ್ಷದ ತಾರತಮ್ಯವಿಲ್ಲದೆ ಕಠಿಣ ಶಿಕ್ಷೆ ನೀಡಬೇಕು, ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ಎಚ್ಚರಿಕೆ : ಜಾದವ್‌ಪುರ ವಿಭಾಗದ ಉಪ ಆಯುಕ್ತರು, ಪ್ರಕರಣದ ದೃಢೀಕರಣವಿಲ್ಲದ ಮಾಹಿತಿ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande