ನವದೆಹಲಿ, 28 ಜೂನ್ (ಹಿ.ಸ.):
ಆ್ಯಂಕರ್:
ಆಚಾರ್ಯ ವಿದ್ಯಾನಂದ ಮಹಾರಾಜರ ಶತಮಾನೋತ್ಸವದ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ‘ಧರ್ಮ ಚಕ್ರವರ್ತಿ’ ಎಂಬ ಗೌರವಪೂರ್ವಕ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಮತ್ತು ಭಾರತ ಸರ್ಕಾರ ಜಂಟಿಯಾಗಿ ಆಯೋಜಿಸಿದ್ದ ಈ ಸಮಾರಂಭವು ಜೈನ ಆಧ್ಯಾತ್ಮಿಕ ಪರಂಪರೆಯ ಮಹತ್ವವನ್ನೂ ಪ್ರತಿಬಿಂಬಿಸಿತು. ಪ್ರಧಾನಮಂತ್ರಿಯವರು ಭಾಷಣದ ವೇಳೆ, ನಮ್ಮನ್ನು ಯಾರು ಕೀಟಲೆ ಮಾಡಿದರೂ... ಎಂಬ ಮಾತುಗಳನ್ನಾಡಿದ ಕ್ಷಣದಲ್ಲೇ, ಭವನದಲ್ಲಿ ಜನರು “ಭಾರತ್ ಮಾತಾ ಕಿ ಜೈ” ಘೋಷಣೆಯಲ್ಲಿ ಮಿಂದೆದ್ದು, ಭಾವೋದ್ರೇಕದಿಂದ ಚಪ್ಪಾಳೆ ಹಾಕಿದರು. ಪ್ರತಿಕ್ರಿಯೆಗೆ ಹರ್ಷಗೊಂಡ ಮೋದಿ, “ನಾನು ಜೈನ ಕಾರ್ಯಕ್ರಮದಲ್ಲಿ ಅಹಿಂಸೆಯ ನಂಬಿಕೆಯ ವ್ಯಕ್ತಿ. ನಾನು ಅರ್ಧ ವಾಕ್ಯವನ್ನಷ್ಟೇ ಹೇಳಿದ್ದೆ, ನೀವು ಅದನ್ನು ಪೂರ್ಣಗೊಳಿಸಿದ್ದೀರಿ. ‘ಆಪರೇಷನ್ ಸಿಂಧೂರ್’ಗೆ ಆಶೀರ್ವಾದ ನೀಡಿದಂತಾಗಿದೆ” ಎಂದು ಹೇಳಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮೋದಿ, “ನಾನು ಈ ಗೌರವಕ್ಕೆ ಅರ್ಹನೆಂದೆನಿಸಿಕೊಳ್ಳುವುದಿಲ್ಲ, ಆದರೆ ಸಂತರು ಕೊಟ್ಟದನ್ನು ಪ್ರಸಾದವಾಗಿ ಸ್ವೀಕರಿಸುವುದು ನಮ್ಮ ಸಂಸ್ಕೃತಿ” ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa