ಕಂಬ, ವೈಯರ್, ಹೈಮಾಸ್ಟ್ ಮುಟ್ಟದಿರುವಂತೆ ಸೂಚನೆ
ರಾಯಚೂರು, 26 ಜೂನ್ (ಹಿ.ಸ.) : ಆ್ಯಂಕರ್ : ಮಳೆಗಾಲ ಆರಂಭವಾದ ಪ್ರಯುಕ್ತ ರಾಯಚೂರು ನಗರದ ವಾರ್ಡಗಳಲ್ಲಿ ಅಳವಡಿಸಿರುವ ಮಿಡಿಯನ್ ದೀಪದ ಕಬ್ಬಿಣದ ಕಂಬಗಳು, ವೈರ್‍ಗಳನ್ನು ಹಾಗೂ ಹೈಮಾಸ್ಟಗಳನ್ನು ಸಾರ್ವಜನಿಕರು ಮುಟ್ಟದಿರುವಂತೆ ರಾಯಚೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಉಪ ಆಯುಕ್ತರು ತಿಳಿಸಿದ್ದಾರೆ. ನಗರದ
ಕಂಬ, ವೈಯರ್, ಹೈಮಾಸ್ಟ್ ಮುಟ್ಟದಿರುವಂತೆ ಸೂಚನೆ


ರಾಯಚೂರು, 26 ಜೂನ್ (ಹಿ.ಸ.) :

ಆ್ಯಂಕರ್ : ಮಳೆಗಾಲ ಆರಂಭವಾದ ಪ್ರಯುಕ್ತ ರಾಯಚೂರು ನಗರದ ವಾರ್ಡಗಳಲ್ಲಿ ಅಳವಡಿಸಿರುವ ಮಿಡಿಯನ್ ದೀಪದ ಕಬ್ಬಿಣದ ಕಂಬಗಳು, ವೈರ್‍ಗಳನ್ನು ಹಾಗೂ ಹೈಮಾಸ್ಟಗಳನ್ನು ಸಾರ್ವಜನಿಕರು ಮುಟ್ಟದಿರುವಂತೆ ರಾಯಚೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಉಪ ಆಯುಕ್ತರು ತಿಳಿಸಿದ್ದಾರೆ.

ನಗರದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಪಾಲಿಕೆಯಿಂದ ನಗರದ ವಾರ್ಡಗಳ ಮುಖ್ಯ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಬೀದಿ ದೀಪಗಳ ಮಿಡಿಯನ್ ಕಬ್ಬಿಣದ ಕಂಬಗಳನ್ನು ಮತ್ತು ಹೈಮಾಸ್ಟಗಳನ್ನು ಅಳವಡಿಸಲಾಗಿದ್ದು, ನಗರದಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಮಿಡಿಯನ್ ದೀಪದ ಕಬ್ಬಿಣದ ಕಂಬಗಳಲ್ಲಿ, ಹೈಮಾಸ್ಟ್ಗಳಲ್ಲಿ ಮತ್ತು ಬೀದಿ ದೀಪ ಅಳವಡಿಸಿರುವ ಆರ್.ಸಿ.ಸಿ./ ಕಬ್ಬಿಣದ ಕಂಬಗಳಲ್ಲಿ ಮತ್ತು ಬೀದಿ ದೀಪಗಳ ನಿಯಂತ್ರಣಕ್ಕಾಗಿ ಅಳವಡಿಸಿರುವ ಪ್ಯಾನೆಲ್ ಬೋಡ್ರ್ಗಳಿಗೆ ಅತಿಯಾದ ಮಳೆಯ ಕಾರಣದಿಂದ ಕರೆಂಟ್ ಸೋರಿಕೆ, ಅಥಿರ್ಂಗ್, ಇಂಡಕ್ಷನ್ ಆಗಿ ಕೆಲವು ಕಂಬಗಳ/ಪ್ಯಾನೆಲ್ ಬೋರ್ಡ್/ಡ್ರಾಪ್ ಸುತ್ತಲೂ ಕರೆಂಟ್ ಪ್ರವಹಿಸಿ ಸಾರ್ವಜನಿಕರಿಗೆ, ಜಾನುವಾರುಗಳಿಗೆ ಶಾಕ್ ಹೊಡೆಯುವ ಸಾಧ್ಯತೆ ಇರುವ ಕಾರಣ ಅವುಗಳ ಹತ್ತಿರ ಹೋಗದಂತೆ, ಅವುಗಳನ್ನು ಮುಟ್ಟದಂತೆ ಹಾಗೂ ಜೆಸ್ಕಾಂನ ಆರ್.ಸಿ.ಸಿ./ಇತರೆ ಕಂಬಗಳಿಗಿರುವ ಬೀದಿ ದೀಪಗಳ ಡ್ರಾಪ್ /ಹುಕ್/ಕಟೌಟ್‍ಗಳನ್ನು ಸಾರ್ವಜನಿಕರು ಹಾಕದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸುವಂತೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande