ಅಂತರಗ0ಗಾ ವಿದ್ಯಾ ಸಂಸ್ಥೆಗೆ ೩೦ ನೇ ವರ್ಷದ ಸೇವಾ ಸಂಭ್ರಮ
ಅಂತರಗ0ಗಾ ವಿದ್ಯಾ ಸಂಸ್ಥೆಗೆ ೩೦ ನೇ ವರ್ಷದ ಸೇವಾ ಸಂಭ್ರಮ
ಕೋಲಾರ ನಗರದ ಹೊರವಲಯದ ಅಂತರಗ0ಗೆ ವಿದ್ಯಾಸಂಸ್ಥೆಯ ೩೦ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೋಲಾರ ನಗರಸಭೆಯ ಅಧ್ಯಕ್ಷ ಲಕ್ಷಿö್ಮದೇವಮ್ಮ ಉದ್ಘಾಟಿಸಿದರು.


ಕೋಲಾರ, ೨೬ ಜೂನ್ (ಹಿ.ಸ) ಆಂಕರ್ :

ಆ್ಯಂಕರ್ : ನಗರದ ಹೊರವಲಯದಲ್ಲಿರುವ ಅಂತರಗ0ಗಾ ವಿದ್ಯಾ ಸಂಸ್ಥೆಯ ವಿಶೇಷ ವಿಕಲಚೇತನ ಮಕ್ಕಳ ವಸತಿ ಶಾಲೆ ಪುನರ್ವಸತಿ ಕೇಂದ್ರ ಮತ್ತು ಅಂತರಗ0ಗೆ ಅಶ್ರಯಧಾಮ ೩೦ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಸೇವಾ ಸಂಭ್ರಮ ಎಂಬ ಶೀರ್ಷಿಕೆ ಯೊಂದಿಗೆ ಶ್ರೀಗಂಧ ಗಿಡಕ್ಕೆ ನೀರೆರೆಯುವ ಮೂಲಕ ಕೋಲಾರ ನಗರಸಭೆಯ ಅಧ್ಯಕ್ಷೆ ಲಕ್ಷಿö್ಮದೇವಮ್ಮ ಉದ್ಘಾಟನೆ ಮಾಡಿದರು.

೧೯೯೫ ರಲ್ಲಿ ಡಾ ಕೆ ಎಸ್ ಶಂಕರ್ ಮತ್ತು ಅವರ ಸಮಾನ ಮನಸ್ಕ ಸ್ನೇಹಿತರೊಂದಿಗೆ ಕೇವಲ ೧೨ ವಿಶೇಷ ಚೇತನ ಮಕ್ಕಳೊಂದಿಗೆ ಪ್ರಾರಂಭಿಸಿದ ಈ ಅಂತರಗ0ಗಾ ವಿದ್ಯಾ ಸಂಸ್ಥೆಯು ಅನೇಕ ನೋವು ನಲಿವನ್ನು ಪಟ್ಟು ಮೇಲೆ ಬಂದು ಈ ದಿನ ಸುಮಾರು ೮೦ ಜನರಿಗೆ ಆಶ್ರಯವನ್ನು ನೀಡುತ್ತಿರುವ ವಿಶೇಷ ಸಂಸ್ಥೆ ಇದಾಗಿದೆ ಅನೇಕ ಸಂಘ ಸಂಸ್ಥೆಗಳೊ0ದಿಗೆ ಕೈ ಜೋಡಿಸಿ, ಮುಖ್ಯವಾಗಿ ದಾನಿಗಳು ನೀಡುವಂತಹ ಸಹಕಾರದಿಂದ ವಿಶೇಷ ಮಕ್ಕಳಿಗೆ ಮತ್ತು ವೃದ್ಧರಿಗೆ ಊಟ ,ಉಪಚಾರ,ಚಿಕಿತ್ಸೆ ,ಮೂಲ ಸೌಕರ್ಯ ನೀಡುತ್ತಾ ಮುನ್ನಡಿಸಿಕೊಂಡು ಹೋಗುತ್ತಿದ್ದು ಗುರುವಾರ ತನ್ನ ೩೦ನೇ ವರ್ಷದ ಸಂಸ್ಥಾಪನ ಕಾರ್ಯಕ್ರಮವನ್ನು ಸೇವಾ ಸಂಭ್ರಮ-೩೦ ಶೀರ್ಷಿಕೆ ಯೊಂದಿಗೆ ಆಚರಿಸಲಾಯಿತು.

ನಗರಸಭೆಯ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ಮಾತನಾಡಿ ಸುಮಾರು ಮೂವತ್ತು ವರ್ಷಗಳಿಂದ ನಿರಂತರವಾಗಿ ನಮ್ಮ ಕೋಲಾರ ನಗರದಲ್ಲಿ ವಿಶೇಷಚೇತನ ಮಕ್ಕಳ ಮತ್ತು ವಯೋವೃದ್ಧರ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಅಂತರಗ0ಗಾ ವಿದ್ಯಾಸಂಸ್ಥೆಗೆ ಅಭಿನಂದನೆ ಸಲ್ಲಿಸಿ ಇಂತಹ ದೇವರ ಮಕ್ಕಳ ಸೇವೆ ಮಾಡಲು ಪುಣ್ಯ ಮಾಡಿರಬೇಕು ಎಂದು ಹೇಳಿ ಸಂಸ್ಥೆಯ ಆವರಣದಲ್ಲಿ ವಿಶೇಷ ಮಕ್ಕಳಿಗೆ ವಿಶೇಷ ಆಸ್ಪತ್ರೆ ನಿರ್ಮಾಣಕ್ಕೆ ನಗರಸಭೆಯಲ್ಲಿ ಚರ್ಚಿಸಿ ಅನುದಾನವನ್ನು ನೀಡುವುದಾಗಿ ತಿಳಿಸಿದರು.

ಇಂಚರ ನಾರಾಯಣಸ್ವಾಮಿ ಮಾತನಾಡಿ ಅಂತರಗ0ಗಾ ವಿದ್ಯಾ ಸಂಸ್ಥೆ ಮಾಡುತ್ತಿರುವ ಸೇವೆಗೆ ಸರ್ಕಾರ ಮತ್ತು ಸಾರ್ವಜನಿಕರು ತಮ್ಮ ವಿಶೇಷ ದಿನಗಳನ್ನು ಇವರೊಂದಿಗೆ ಆಚರಿಸಿ ಸಹಕರಿಸಬೇಕು ಎಂದು ತಿಳಿಸಿದರು.

ವೇಣುಗೌಡ ಮಾತನಾಡಿ ನಾನು ಒಂದು ವರ್ಷದ ಹಿಂದೆ ಈ ಒಂದು ಶಾಲೆಯಲ್ಲಿ ನಮ್ಮ ಕಾರ್ಯಕ್ರಮವನ್ನು ಆಚರಣೆ ಮಾಡಲು ಬಂದಿದ್ದೇವೆ ಆಗ ನಾವು ಯಾವುದಾದರೂ ರೀತಿಯಲ್ಲಿ ಸೇವೆಯನ್ನು ಮಾಡಬೇಕು ಅಂದುಕೊ0ಡೆ ಅವಾಗ ನನಗೆ ಅರಿವಾಗಿದ್ದು ಸಾಮಾಜಿಕ ಜಾಲತಾಣ ಬಲಿಸಿಕೊಂಡು ನಮ್ಮ ಸೇವೆಯನ್ನು ವಿಸ್ತರಿಸಬಹುದು ಎಂದು ಅಂತರಗAಗಾ ಅಶ್ರಯಧಾಮ ವಾಟ್ಸಾಪ್ ಗ್ರೂಪ್ ಮಾಡಿ ಅದರ ಮೂಲಕ ನಮ್ಮ ಗೆಳೆಯರೊಂದಿಗೆ ಚರ್ಚಿಸಿ ಪ್ರತಿ ತಿಂಗಳು ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.

ಸಂಸ್ಥಾಪಕ ಕಾರ್ಯದರ್ಶಿ ಡಾ. ಕೆ.ಎಸ್.ಶಂಕರ್ ಮಾತನಾಡಿ ೧೯೯೫ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದೆ ಆದರೆ ಅಂದಿನ ದಿನಗಳಲ್ಲಿ ನಮ್ಮ ಸಂಸ್ಥೆಗೆ ಮಕ್ಕಳನ್ನು ಸೇರಿಸಲು ಮುಂದೆ ಬರಲಿಲ್ಲ ಆದರೆ ನಾವು ಛಲವನ್ನು ಬಿಡದೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳಿ ಮತ್ತು ಗ್ರಾಮ ಗಳಿಗೆ ಹೋಗಿ ಮನೆಮನೆಗೆ ಭೇಟಿನೀಡಿ ತಮ್ಮ ವಿಶೇಷ ಮಕಳನ್ನು ನಮ್ಮ ಸಂಸ್ಥೆಯಲ್ಲಿ ಸೇರಿಸಿ ಎಂದು ಕೇಳಿಕೊಂಡಾಗ ಸುಮಾರು ೪೦ ಹೆಚ್ಚು ಮಕ್ಕಳು ಮತ್ತು ವೃದ್ಧಾರನ್ನು ದಾಖಲಾತಿ ಮಾಡಿಸಿದರು ಆದರೆ ಇವರೆಲ್ಲ ನಿರ್ವಹಣೆಯನ್ನು ಮಾಡಲು ನನಗೆ ದಾನಿಗಳು ಬೆನ್ನೆಲುಬಾಗಿ ನಿಂತರು ಆದ್ದರಿಂದಲೇ ನಾವು ಸಹ ಮುಂದೆ ನಿಂತು ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಅನೇಕ ದಾನಿಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಅಂತರಗ0ಗಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಗೋಕವರಪು, ಅಂಬಾ ಸಂಸ್ಥೆಯ ಮುಖ್ಯಸ್ಥರಾದ ಚೈತ್ರ ಹೆಗ್ಡೆ,ಪ್ಯಾಕ್ಟ್ ಸಂಸ್ಥೆಯ ಮುಖ್ಯಸ್ಥರಾದ ಮಾಲಾ ಜಯಶಂಕರ್, ಸುಪ್ರೀಂ ಸಂಸ್ಥೆಯ ಮುಖ್ಯಸ್ಥರಾದ ಸುಪ್ರೀಮ್, ನಗರಸಭೆ ಉಪಾಧ್ಯಕ್ಷರಾದ ಸಂಗೀತಾ ಜಗದೀಶ್, ಸದಸ್ಯರಾದ ಭಾಗ್ಯಮ್ಮ ಜಯರಾಂ, ನಿರ್ದೇಶಕರಾದ ರಾಧಮ್ಮ, ಚಂದ್ರಶೇಖರ್, ವೆಂಕಟೇಶಪ್ಪ, ನೀತು ಮೆಹ್ತಾ, ರವೀಂದ್ರ, ರಮೇಶ್, ಪ್ರಕಾಶ್,ಶಂಕರ್ ರಾವ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಭಾಗಹಿಸಿದ್ದರು.

ಚಿತ್ರ : ಕೋಲಾರ ನಗರದ ಹೊರವಲಯದ ಅಂತರಗ0ಗೆ ವಿದ್ಯಾಸಂಸ್ಥೆಯ ೩೦ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೋಲಾರ ನಗರಸಭೆಯ ಅಧ್ಯಕ್ಷ ಲಕ್ಷಿö್ಮದೇವಮ್ಮ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande