ಬೆಂಗಳೂರು, 18 ಜೂನ್ (ಹಿ.ಸ.) :
ಆ್ಯಂಕರ್ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನ ಸೌಧ ಆವರಣದಲ್ಲಿ ಸೈಕಲ್ ಸವಾರಿ ಮಾಡಿದ ಫೋಟೋಗಳು ವೈರಲ್ ಆದ ನಂತರ, ಖ್ಯಾತ ಉದ್ಯಮಿ ಮೋಹನ್ದಾಸ್ ಪೈ ಸರ್ಕಾರವನ್ನು ಸಾರ್ವಜನಿಕರಿಗೆ ವಿಧಾನ ಸೌಧ ಆವರಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಿದ್ದಾರೆ.
ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ, ರಜಾ ದಿನಗಳಲ್ಲಿ ನಾಗರಿಕರಿಗೆ ಉಚಿತ ಪ್ರವೇಶ ನೀಡಬೇಕು ಎಂದು ಸಲಹೆ ನೀಡಿದ್ದು, “ಇದು ಜನರ ಅರಮನೆ. ಮೊದಲು ನಮಗೆ ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳಲು ಅವಕಾಶ ಇತ್ತು, ಈಗ ಇಲ್ಲ. ದಯವಿಟ್ಟು ಮಕ್ಕಳಿಗೂ ಆವರಣದಲ್ಲಿ ಆಟವಾಡಲು ಅವಕಾಶ ನೀಡಿ” ಎಂದು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa