ಬಳ್ಳಾರಿ, 30 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಹಮ್ಮಿಕೊಂಡಿರುವ `ಸಲಾಂ ಬಳ್ಳಾರಿ' ಅಭಿಯಾನವು ಶುಕ್ರವಾರ 7ನೇ ವಾರ್ಡ್ನಲ್ಲಿ ನಡೆದು, ವಾರ್ಡ್ನಲ್ಲಿರುವ ಮೂಲಭೂತ ಸಮಸ್ಯೆಗಳ ನಿವಾರಣೆಗೆ 4 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಳ್ಳಾರಿ ನಗರದ 7ನೇ ವಾರ್ಡ್ನ ಬಾಪೂಜಿನಗರ ಹಾಗೂ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು, ಜನಗಳ ಜೊತೆ ಮಾತನಾಡುತ್ತಲೇ, ತೆರೆದ ಚರಂಡಿ, ಒಳಚರಂಡಿ, ರಸ್ತೆ, ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪ ಇನ್ನಿತರೆ ವಿಷಯಗಳ ಕುರಿತು ಮಾಹಿತಿ ಪಡೆದು, ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಕಾಂಗ್ರೆಸ್ ಪಕ್ಷದ ವಕ್ತಾರ ವೆಂಕಟೇಶ ಹೆಗಡೆ, 7ನೇ ವಾರ್ಡಿನ ಪಾಲಿಕೆಯ ಸದಸೆ ಉಮಾದೇವಿ, ಮಾಜಿ ಮೇಯರ್ ಎಂ. ರಾಜೇಶ್ವರಿ, ಕಾರ್ಪೊರೇಟರ್ಗಳಾದ ಎಂ. ಪ್ರಭಂಜನಕುಮಾರ್, ಮಿಂಚು ಸೀನಾ, ರಾಮಾಂಜನೇಯ, ಮುಖಂಡರಾದ ವಿಷ್ಣು ಬೋಯಪಾಟಿ, ಶಿವರಾಜ್, ಭರತ್, ಎಂ. ಸುಬ್ಬರಾಯುಡು, ಕೆ. ಶ್ರೀನಿವಾಸ್, ಬಿಆರೆಲ್ ಸೀನಾ, ಚಾನಾಳ್ ಶೇಖರ್, ಚಂಪಾ ಚವ್ಹಾಣ್, ಹುಸೇನ್ ಪೀರಾಂ, ಕುಡತಿನಿ ರಾಮಾಂಜನೇಯ, ಥಿಯೇಟರ್ ಶಿವು, ಬುಜ್ಜಿ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್