ಕೋಲಾರ, ೦೧ ಜೂನ್ (ಹಿ.ಸ) :
ಆ್ಯಂಕರ್ : ಮನುಷ್ಯರಾದ ನಮಗೆ ದೇವಋಣ, ಪಿತೃಋಣ ಮತ್ತು ಋಷಿ ಋಣಗಳಿದ್ದು, ಪೂಜೆ ಹೋಮಗಳಿಂದ ದೇವಋಣ, ಅನ್ನದಾನ, ಪಿತೃಕಾರ್ಯಗಳಿಂದ ಪಿತೃಋಣ ತೀರಿಸಬಹುದಾಗಿದ್ದು, ಋಷಿಋಣ ತೀರಿಸಲು ವೇದಾಧ್ಯಯನ ಒಂದೇ ಮಾರ್ಗವಾಗಿದೆ ಎಂದು ಕೋಲಾರದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ ಕರೆ ನೀಡಿದರು.
ನಗರದ ಬ್ರಾಹ್ಮಣ ಸಂಘದ ವತಿಯಿಂದ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸಾಮೂಹಿಕ ಧರ್ಮೋಪನಯನ ಮಾಡಿಕೊಂಡ ನೂತನ ವಟುಗಳನ್ನುದ್ದೇಶಿಸಿ ಮಾತನಾಡಿದರು.
ತ್ರಿಮತಸ್ಥ ವಿಪ್ರ ಬಾಂಧವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನಗಳನ್ನು ನಡೆಸಿಕೊಂಡು ಬಂದಿದ್ದು, ಇದರ ಪ್ರಯೋಜನವನ್ನು ಈ ಬಾರಿಯೂ ಹಲವು ಕುಟುಂಬಗಳವರು ಪಡೆದುಕೊಂಡಿದ್ದಾರೆ ೬ ಮಂದಿ ಇಂದು ವಟುಗಳಾಗಿದ್ದಾರೆ ಎಂದರು.
ಎಲ್ಲರ ಒಳಿತಿಗಾಗಿ ಕಂಡು ಕೊಂಡAತಹ ಗಾಯತ್ರಿ ಮಂತ್ರ ವಿಶ್ವಾಮಿತ್ರ ಋಷಿಗಳಿಂದ ಭೂಮಿಯಲ್ಲಿ ಪ್ರಚಾರಕ್ಕೆ ಬಂದಿತು ಎಂದರು.
ಈ ಮಂತ್ರದ ಜಪದಿಂದ ಇಡೀ ಬ್ರಹ್ಮಾಂಡದಲ್ಲಿನ ಎಲ್ಲಾಜೀವಿಗಳಿಗೂ ಒಳಿತಾಗುತ್ತದೆ. ವೇದಾಧ್ಯಯನ ಅಧಿಕಾರ ಪಡೆಯಲು ಇರುವ ಅವಕಾಶ ಬ್ರಾಹ್ಮಣರಿಗೆ ಮಾತ್ರವಾಗಿದ್ದು, ಉಪನಯನದ ನಂತರ ಪ್ರತಿ ನಿತ್ಯ ವೇದಾಧ್ಯಯನ ಮಾಡಿ ಎಂದು ಕರೆ ನೀಡಿದರು.
ಆದ್ದರಿಂದ ಬ್ರಾಹ್ಮಣರು ತಪ್ಪದೇ ವೇದಾಧ್ಯಯನ ಮಾಡಲೇಬೇಕು ಎಂದು ಕಿವಿಮಾತು ಹೇಳಿ, ಗಾಯಂತ್ರಿ ಮಂತ್ರದ ಪಠಣೆಯಿದಿಂದಾಗುವ ಪ್ರಯೋಜನಗಳ ಕುರಿತು ತಿಳಿಸಿದರು.
ವೇದವೆಂದರೆ ಜ್ಞಾನ, ವೇದಗಳು ನಮ್ಮ ಸಂಸ್ಕೃತಿ,ಪರ0ಪರೆಗೆ ಸಾಕ್ಷಿಯಾಗಿವೆ, ವೇದಗಳು ನಮ್ಮ ಭಾರತ ಮಾತ್ರವಲ್ಲ ವಿಶ್ವಮಟ್ಟದಲ್ಲೂ ಮಾನ್ಯತೆ ಗಳಿಸಿದ್ದು, ನಮ್ಮ ಹಿಂದೂ ಭವ್ಯ ಭಾರತಕ್ಕೆ ಮಾರ್ಗದರ್ಶನ ನೀಡುವುದಾಗಿದೆ ಎಂದು ತಿಳಿಸಿದರು.
ವೇದ ಮಂತ್ರಗಳು ವ್ಯಕ್ತಿಜೀವನದ ಸಮಗ್ರ ಚಿತ್ರವನ್ನು ನೀಡಬಲ್ಲವು, ಪರಸ್ಪರ ಸಂಬ0ಧ, ಬದುಕು, ಸಂಸ್ಕಾರದ ಪಾಠ ಕಲಿಸುವ ವೇದಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅಂತಹ ಅವಕಾಶ ವಟುಗಳಾದ ನಿಮ್ಮದಾಗಿದೆ ಎಂದರು.
ವೇದವ್ಯಾಸ ಸಂಸ್ಕೃತ ಪಾಠಶಾಲೆಯ ವೇದಬ್ರಹ್ಮ ರಾಮಕೃಷ್ಣಭಟ್ಟರು, ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ ತಿಳಿಸಿಕೊಟ್ಟು, ಗಾಯತ್ರಿ ಮಂತ್ರದ ನಿತ್ಯ ಪಠಿಸುವುದರಿಂದಾಗುವ ಪ್ರಯೋಜನ ಮತ್ತು ನಿಮ್ಮ ಮನಸ್ಸಿನಲ್ಲಿನ ಕಶ್ಮಲಗಳು ದೂರವಾಗಿ ನಿಮಗೆ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ವೈದಿಕ ಋಷಿಗಳ ಅನುಭವಗಳು, ದರ್ಶನಗಳು ಮಂತ್ರರೂಪವಾಗಿ ಭಾರತದ ಆಧ್ಯಾತ್ಮಿಕ, ಸಾಂಸ್ಕತಿಕ ಪರಂಪರೆಯನ್ನು ಪುಷ್ಟಿಗೊಳಿಸಿದೆ ಅಂತಹ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮಲ್ಲಿ ಜ್ಞಾನಾಭಿವೃದ್ದಿಯ ಜತೆಗೆ ಮನಸ್ಸಿನ ಚಂಚಲ್ಯ ದೂರವಾಗಿ ತದೇಕ ಚಿತ್ತತೆ ಮೂಡುತ್ತದೆ ಎಂದರು.
ಸಾಮೂಹಿಕ ಧರ್ಮೋಪಯನಯದಲ್ಲಿ ಪಿ.ಗಂಗಾಧರ್ ಪಾರ್ಥಸಾರಥಿ, ಪವನ್ಕುಮಾರ್, ಎನ್.ಪ್ರಮೋದ್, ವಿನ್ಯಾಸ್ ಕುಮಾರ್, ಮಧುಸೂದನ್, ಮನೀಶಾ ನೂತನ ವಟುಗಳಾಗಿದ್ದು,ಪುರೋಹಿತರಾಗಿ ರಾಮಕೃಷ್ಣಭಟ್, ಜೆ.ಎನ್.ರಾಮಕೃಷ್ಣ, ಹುದುಕುಳ ಅಪ್ಪಣ್ಣ ಶಾಸ್ತಿçಗಳು, ಪುನೀತ್, ಸುರೇಶ್, ಪ್ರಕಾಶ್, ಕೋಲಾರ ಬ್ರಾಹ್ಮಣ ಸಂಘದ ಕೆ.ಚಂದ್ರಪ್ರಕಾಶ್, ಉದಯಕುಮಾರ್, ಡಾ.ಕೃಷ್ಣಮೂರ್ತಿ, ಉಮೇಶ್, ವರುಣ್,ಜಯತೀರ್ಥ, ಮುರಳಿ ಸುಂದರ್, ಹಾಬಿ ರಮೇಶ್, ಶಿವಶಂಕರ್, ಶ್ರೀನಿವಾಸ್, ಪ್ರವೀಣ್, ಸೈಕಲ್ಶಾಪ್ ಕೃಷ್ಣಮೂರ್ತಿ, ಪಟ್ಟಾಭಿ, ಮಂಜುನಾಥ್, ಮುರಳಿ ರಾಮಾನುಜಂ, ವರದರಾಜ್, ಪಾರ್ಥಸಾರಥಿ, ರವಿಶಂಕರ್, ವಿನುತಾ ಮಧುಕರ್ ಭಾಗವಹಿಸಿದರು.
ಚಿತ್ರ : ಕೋಲಾರ ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಧರ್ಮೋಪನಯನದ ನಂತರ ವಟುಗಳ ಶೋಭಾಯಾತ್ರೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್