ಶಿಕ್ಷಕ ಗೆಳೆಯರ ಬಳಗದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಶಿಕ್ಷಕ ಗೆಳೆಯರ ಬಳಗದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಶಿಕ್ಷಕ ಗೆಳೆಯರ ಬಳಗದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ


ಕೋಲಾರ, ೦೧ ಜೂನ್ (ಹಿ.ಸ) ಆಂಕರ್ :

ಆ್ಯಂಕರ್ : ಪ್ರತಿ ವರ್ಷದಂತೆ ಈ ಬಾರಿಯೂ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಶಿಕ್ಷಕರ ಮಕ್ಕಳಿಗೆ ಶಿಕ್ಷಕ ಗೆಳೆಯರ ಬಳಗದಿಂದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ, ಪ್ರತಿಭಾವಂತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಕೋಲಾರ ನಗರದ ಕೆಇಬಿ ಸಭಾಂಗಣದ ಹತ್ತಿರ ಶಿಕ್ಷಕ ಗೆಳೆಯರ ಬಳಗದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಸುಮಾರು ವರ್ಷಗಳಿಂದ ಶಿಕ್ಷಕರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವರ್ಷವೂ ಗಣ್ಯರಿಂದ ಸಾಧಕ ಮಕ್ಕಳನ್ನು ಸನ್ಮಾನಿಸಲಾಗುವುದು ಆದ್ದರಿಂದ ತಾಲೂಕಿನ ಎಲ್ಲಾ ಶಿಕ್ಷಕರು ತಮ್ಮ ಮಕ್ಕಳ ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ವೆಂಕಟಾಚಲಪತಿ ಕಾರ್ಯದರ್ಶಿಗಳು-೯೯೮೦೩೧೯೭೨೮, ಚಿಕ್ಕಣ್ಣ ಸಹ ಕಾರ್ಯದರ್ಶಿಗಳು-೭೬೧೯೬೫೫೯೦೦, ವೀರಣ್ಣಗೌಡ- ಉಪಾಧ್ಯಕ್ಷರು ೯೪೪೮೩೩೩೦೦೨, ಅಶ್ವಥ್ ಸಂಘಟನಾ ಕಾರ್ಯದರ್ಶಿಗಳು- ೮೨೭೭೩೨೪೪೪೧, ಚಂದ್ರಪ್ಪ ಖಜಾಂಚಿ-೮೬೬೦೮೦೬೫೧೪, ವೆಂಕಟರಾಮ್ ಕಾರ್ಯದರ್ಶಿಗಳು-೯೯೦೨೫೯೦೨೩೦, ಪಾಪಣ್ಣ ಸಹ ಕಾರ್ಯದರ್ಶಿಗಳು-೯೪೮೧೮೨೯೫೩೯ ಅವರನ್ನು ಸಂಪರ್ಕಿಸಲು ಕೋರಿದರು.

ಸಭೆಯಲ್ಲಿ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಕಾರ್ಯದರ್ಶಿ ವೆಂಕಟಾಚಲಪತಿ, ಸಹ ಕಾರ್ಯದರ್ಶಿ ಚಿಕ್ಕಣ್ಣ, ಸಂಘಟನಾ ಕಾರ್ಯದರ್ಶಿಗಳಾದ ಅಶ್ವಥ್, ವೆಂಕಟರಾಮ್, ಉಪಾಧ್ಯಕ್ಷ ವೀರಣ್ಣ ಗೌಡ, ಚಂದ್ರಪ್ಪ, ಗೋವಿಂದು, ಕೃಷ್ಣಪ್ಪ, ನಾಗರಾಜ್ ಉಪಸ್ಥಿತರಿದ್ದರು

ಶಿಕ್ಷಕರು ತಮ್ಮ ಮಕ್ಕಳಮಾಹಿತಿಯನ್ನು ಅತಿ ಶೀಘ್ರ ನೀಡಲು ಕೋರಿದ ಅವರು, ಮಾಹಿತಿ ಸಂಗ್ರಹಿಸಿದ ಶಿಕ್ಷಕ ¨ಳಗದ ಪದಾಧಿಕಾರಿಗಳು ಜೂ. ೧೦ ರೊಳಗೆ ಮಾಹಿತಿಯನ್ನು ಬಳಗಕ್ಕೆ ತಲುಪಿಸಲು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande