
ಕೊಪ್ಪಳ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಕೆರೆಹಳ್ಳಿ ಗ್ರಾಮದಲ್ಲಿ ಹನುಮ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಐತಿಹಾಸಿಕ ಗ್ರಾಮವಾದ ಕೆರೆಹಳ್ಳಿ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ವೀರಭದ್ರೇಶ್ವರ ಸ್ವಾಮಿಯಿಂದಾಗಿ ಪ್ರಸಿದ್ಧಿಪಡೆದಿದ್ದು ಅಂಜನಾದ್ರಿಗೆ ತೆರಳುವ ಹನುಮ ಮಾಲಾಧಾರಿಗಳಿಗೆ ಇಡೀದ ದಿನ ಅನ್ನದಾಸೋಹ ಏರ್ಪಡಿಸಿ ಧಾರ್ಮಿಕ ಭಾವನೆಯನ್ನು ಊರ್ಜಿತಗೊಳಿಸಲಾಯಿತು.
ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕೆರೆಹಳ್ಳಿ ಗ್ರಾಮದ ಸಮಸ್ತ ಗುರು ಹಿರಿಯರು ಮತ್ತು ಯುವಕ ಮಂಡಳಿಯವರು ಆಯೋಜಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್