

ಸಿಂಧನೂರು, 24 ಡಿಸೆಂಬರ್ (ಹಿ.ಸ.);
ಆ್ಯಂಕರ್ :
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಿಂಧನೂರು ಉಪ ವಿಭಾಗದ ಎಇಇ ವಿಜಯಲಕ್ಷ್ಮಿ ನಿವಾಸ ಕಚೇರಿ ಮೇಲೆ ಲೋಕಾಯುಕ್ತರ ಎರಡು ತಂಡಗಳು ದಾಳಿ ನಡೆಸಿವೆ.
ಬೆಳ್ಳಂ ಬೆಳಿಗ್ಗೆ ಬಳ್ಳಾರಿ - ಕೊಪ್ಪಳ ಲೋಕಾಯುಕ್ತ ಹಿರಿಯ ಅಧಿಕಾರಿಗಳ ತಂಡ ಆದಾ ಯ ಮೀರಿ ಆಸ್ತಿ ಗಳಿಕೆ ಸಂಬಂಧಿಸಿದ ದೂರಿ ನ ಹಿನ್ನೆಲೆಯಲ್ಲಿ ರಾಯಚೂರಿನ ಐಡಿಎಸ್ ಎಮ್ ಟಿ, ಸಿಂಧನೂರಿನ ಕಚೇರಿ, ದೇವದುರ್ಗದಲ್ಲಿನ ಸಹೋದರಿ ಮನೆ ಮೇಲೂ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ನಿವೇಶನ, ಜಮೀನು, ಮನೆ ಖರೀದಿಸಿದ ಮೂಲಗಳ ಹುಡುಕಾಟ ಜೊತೆಗೆ ಆಭರಣಗಳ ಖರೀದಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್