ರಾಯಚೂರು : ಲಾರಿ ಹರಿದು ತಂದೆ, ಮಗ ಸ್ಥಳದಲ್ಲೇ ಸಾವು
ರಾಯಚೂರು, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಸ್ತೆ ಬದಿಯಲ್ಲಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ - ಮಗನ ಮೇಲೆ ಲಾರಿ ಹರಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಯರಮರಸ್ ಬೈಪಾಸ್‍ನಲ್ಲಿ ನಡೆದಿದೆ. ಮೃತರು ತಂದೆ ನಾಗಪ್ಪ (64) ಇವರ ಪುತ್ರ ರಮೇಶ್ (45) ಎಂದು ಪೊಲೀಸರು ತಿಳಿಸ
ರಾಯಚೂರು : ಲಾರಿ ಹರಿದು ತಂದೆ - ಮಗ ಸ್ಥಳದಲ್ಲೇ ಸಾವು


ರಾಯಚೂರು : ಲಾರಿ ಹರಿದು ತಂದೆ - ಮಗ ಸ್ಥಳದಲ್ಲೇ ಸಾವು


ರಾಯಚೂರು, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಸ್ತೆ ಬದಿಯಲ್ಲಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ - ಮಗನ ಮೇಲೆ ಲಾರಿ ಹರಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಯರಮರಸ್ ಬೈಪಾಸ್‍ನಲ್ಲಿ ನಡೆದಿದೆ.

ಮೃತರು ತಂದೆ ನಾಗಪ್ಪ (64) ಇವರ ಪುತ್ರ ರಮೇಶ್ (45) ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ - ಮಗನ ಮೇಲೆ ಅತಿ ವೇಗವಾಗಿ ಮತ್ತು ಅಜಾಗರೂಕತೆಯ ಚಾಲನೆಯ ಕಾರಣ ಇವರ ಮೇಲೆ ಲಾರಿಯು ಹರಿದಿದೆ. ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಾರಿ ಚಾಲಕ ಮತ್ತು ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande