
ಗದಗ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ : ಗದಗ ತಾಲ್ಲೂಕಿನ ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ಘನಮೌನಿ, ತ್ರಿಕಾಲ ಜ್ಷಾನಿ, ಮೌನತೌಪಸ್ವಿ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಶ್ರೀಮಠದಲ್ಲಿರುವ ಕರ್ತೃ ಗದ್ದುಗೆಗೆ ಕಾರ್ತಿಕ ಮಾಸದ ಅಂಗವಾಗಿ ಇದೇ ಡಿಸೆಂಬರ 4 ರಂದು ಸಂಜೆ 6.30 ಗಂಟೆಗೆ ಪೂಜ್ಯರ ಅಮೃತ ಹಸ್ತದಿಂದ ದೀಪೋತ್ಸವ ಕಾರ್ಯಕ್ರಮ ಜರುಗುವುದು ಹಾಗೂ 547 ನೇ ಮಾಸಿಕ ಶಿವಾನುಭವಗೋಷ್ಠಿ ಮತ್ತು ಸಂಗೀತ ಸುಧೆ ಕಾರ್ಯಕ್ರಮ ಜರಗುವುದು.
ಈ ಕಾರ್ಯಕ್ರಮದಲ್ಲಿ ಹೊಸಳ್ಳಿಯ ಬೂದೀಶ್ವರ ಶ್ರೀಮಠದ ಪೂಜ್ಯಶ್ರೀ ಜ. ಅಭಿನವ ಬೂದೀಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಬಳಗಾನೂರು ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಅಧ್ಯಕ್ಷತೆವಹಿಸುವರು.
ಶಿವಾನುಭವದಲ್ಲಿ ಶಿವಲಿಂಗ ಶಾಸ್ತ್ರಿಗಳು ಸಿದ್ದಾಪೂರ ಇವರಿಂದ ಪ್ರವಚನ ಜರುಗುವದು. ಎಚ್.ಎಸ್.ವೆಂಕಟಾಪೂರ ಗ್ರಾಮದ ಕುಮಾರಸ್ವಾಮಿ ಹಿರೇಮಠ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ಜರುಗುವುದು ಇವರಿಗೆ ತಬಲಸಾಥ್ ಕಲಬುರಗಿಯ ಶಶಿಕುಮಾರ ಅವರು ನೀಡುವರು ಎಂದು ಶ್ರೀಮಠದ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP