
ರಾಯಚೂರು, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಿಮ್ಮ ಹಣ ನಿಮ್ಮ ಹಕ್ಕು ಎಂಬ ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಬೆಂಗಳೂರಿನ ಆರ್ಬಿಐ ಅಧಿಕಾರಿ ಪ್ರಭಾಕರನ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅಭಿಯಾನವು 2025ರ ಅಕ್ಟೋಬರ್ ರಿಂದ 2025ರ ಡಿಸೆಂಬರ್ ರವರೆಗೆ ನಡೆಯುತ್ತಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಡಿಇಎಎಫ್ ಅಥವಾ ನಿಷ್ಕ್ರಿಯ ಖಾತೆಗಳನ್ನು ಬ್ಯಾಂಕ್ಗಳಿಗೆ ಕೆವೈಸಿ ಒದಗಿಸುವ ಮೂಲಕ ಸಕ್ರಿಯಗೊಳಿಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ 3,65,981 ಖಾತೆಗಳ ಪೈಕಿ 82.74 ಕೋಟಿ ರೂ.ಗಳು ಡಿಇಎಎಫ್ನಲ್ಲಿವೆ ಎಂದರು.
ಇದೇ ಸಂದರ್ಭದಲ್ಲಿ ಲೀಡ್ ಜಿಲ್ಲಾ ವ್ಯವಸ್ಥಾಪಕರಾದ ಪಾಂಡಪ್ಪ ಸೇರಿದಂತೆ ಬ್ಯಾಂಕ್ಗಳ ವ್ಯವಸ್ಥಾಪಕರು ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್