
ರಾಯಚೂರು, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಲ್ಲಮ ಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಅಧ್ಯಕ್ಷರನ್ನಾಗಿ ಲಕ್ಷ್ಮಣ ಹುಲಿಗಾರ ಹಾಗೂ ಉಪಾಧ್ಯಕ್ಷರನ್ನಾಗಿ ಮೋದಿ ಕೃಷ್ಣಮೂರ್ತಿ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರದ ಅಲ್ಲಮಪ್ರಭು ಕಾಲೋನಿಯಲ್ಲಿರುವ ಸಂಘದ ಕಚೇರಿಯಲ್ಲಿ ಸಂಘದ ನಿರ್ದೇಶಕ ಬಾಷುಮಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಂಗಪ್ಪ ಡಿ.ಶರಣಮ್ಮ, ವಿ.ಲಕ್ಷ್ಮೀದೇವಿ, ರಾಯಪ್ಪ ಮಾಸ್ಟರ್, ಚಂದ್ರಶೇಖರ್, ಸುರೇಶ್ ಸಾಹುಕಾರ, ವೀರೇಶ್ ನಾಗಲದಿನ್ನಿ, ತಿಮ್ಮಣ್ಣ ಯಾದವ್, ರಾಮಪ್ಪ ಸಂಘದ ಕಾರ್ಯದರ್ಶಿಅಂಬರಪ್ಪ ಅಮ್ಮದಿಹಾಳ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್